Share this news

ಕಾರ್ಕಳ: ಶಾರದಾ ಮಹಿಳಾ ಮಂಡಲದ ಅಧ್ಯಕ್ಷೆ ಸಾವಿತ್ರಿ ಮನೋಹರ್ ಹಾಗೂ ಪುತ್ರಿ ಸ್ವಾತಿ ಅಜಿತ್ ಶರ್ಮ ಅವರ ಕೃತಿ ಬಿಡುಗಡೆ ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಹಾಗೂ ಶಾರದಾ ಮಹಿಳಾ ಮಂಡಳಿ ಅನಂತಶಯನ ಇವುಗಳ ಸಹಭಾಗಿತ್ವದಲ್ಲಿ ಪೆರ್ವಾಜೆ ಶಾಲೆಯಲ್ಲಿ ಜರುಗಿತು.

ನಿವೃತ್ತ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಮನೋಹರ್ ತಮ್ಮ ಕೃತಿಯ ಕುರಿತು ಅನಿಸಿಕೆಗಳನ್ನು ಹಂಚಿಕೊAಡರು.ಅವರ ಮಾನನಿಧಿ ಮೌನವಾದ ಎಂಬ ನಾಟಕ ಕೃತಿಯನ್ನು ಲೇಖಕಿ  ಡಾ. ಜಾನಕಿ ಸುಂದರೇಶ್  ಬಿಡುಗಡೆ ಮಾಡಿ ಕೃತಿಯ ಕುರಿತು ಮಾತನಾಡಿದರು.

ಸ್ವಾತಿ ಅಜಿತ್ ಶರ್ಮ ಅವರ  ಪಂಜರದೊಳಗಿನ ಪಕ್ಷಿ ಚೊಚ್ಚಲ ಕವನ ಸಂಕಲನವನ್ನು ಅವರ ಹೆತ್ತವರಾದ ನಿವೃತ್ತ ಮುಖ್ಯೋಪಾಧ್ಯಾಯರಾದ ಮನೋಹರ ರಾವ್ ಹಾಗೂ ಸಾವಿತ್ರಿ ಮನೋಹರ ಅವರು ಲೋಕಾರ್ಪಣೆ ಮಾಡಿದರು. ಸ್ವಾತಿ ಅಜಿತ್ ಶರ್ಮ ತಮ್ಮ ಕೃತಿಯ ಕುರಿತು ಮಾತನಾಡಿದರು. 
ನಿವೃತ್ತ ಅಧ್ಯಾಪಕಿ ಸುಲೋಚನ ತಿಲಕ್  ಪಂಜರದೊಳಗಿನ ಪಕ್ಷಿ ಕೃತಿಯ ಕುರಿತು  ಮಾತನಾಡಿದರು. ಜಾಗೃತಿಯ ಅಧ್ಯಕ್ಷೆ ಪ್ರೊ.ಮಿತ್ರಪ್ರಭಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಪೂರ್ಣಚಂದ್ರ ಹಂದಿಗೋಡು ಅವರ ತೆಂಗಿನ ಕರಟದಿಂದ ಮಾಡಿದ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಕನ್ನಡದಲ್ಲಿ ಪೂರ್ಣ ಅಂಕಗಳನ್ನು ಪಡೆದ ಅಕ್ಷರ ಅವರನ್ನು ಸನ್ಮಾನಿಸಲಾಯಿತು.
ಕುಮಾರಿ ಆದ್ಯಾ ಶರ್ಮ,ವಿಶ್ರುತ್ ಶರ್ಮ,ನಿರ್ಜರ ರಾವ್, ಓಂಕಾರ್ ರಾವ್ ಪ್ರಾರ್ಥಿಸಿ, ಜಾಗೃತಿಯ ಕಾರ್ಯದರ್ಶಿ ಮಾಲತಿ.ಜಿ.ಪೈ ಸ್ವಾಹತಿಸಿದರು. ಶಿಕ್ಷಕಿ ಲಕ್ಷ್ಮಿ ಹೆಗ್ಡೆ ವಂದಿಸಿ, ಶಿಕ್ಷಕಿ ಜ್ಯೋತಿ ಪಾಠಕ್ ನಿರೂಪಿಸಿದರು.

 

 

Leave a Reply

Your email address will not be published. Required fields are marked *