ಕಾರ್ಕಳ: ಕಳೆದ ಹಲವು ದಶಕಗಳಿಂದ ಕಾರ್ಕಳದಲ್ಲಿ ದಿನಪತ್ರಿಕೆಗಳ ಏಜೆಂಟ್ ಆಗಿದ್ದ ಕಾರ್ಕಳ ಆನೆಕೆರೆಯ ಗಣಪತಿ ಭಟ್(80ವ) ಅವರು ಶುಕ್ರವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರು ಸ್ವಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ದಿನಪತ್ರಿಕೆಗಳು, ಕಥೆ, ಕಾದಂಬರಿ,ಮಂಗಳ ಸೇರಿದಂತೆ ಎಲ್ಲಾ ರೀತಿಯ ಪುಸ್ತಕಗಳ ಮಾರಾಟದ ಮೂಲಕ ಮನೆಮಾತಾಗಿದ್ದರು.
ಮೃತ ಗಣಪತಿ ಭಟ್ ಅವರು ಇಬ್ಬರು ಪುತ್ರರು,ಓರ್ವ ಪುತ್ರಿ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.
`