ಕಾರ್ಕಳ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ವಿರೋಧಿಗಳ ಅಪಪ್ರಚಾರ, ಟೀಕೆಗಳು ನಿರೀಕ್ಷಿತ ಆದರೆ ಇಂತಹ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿದಾಗಲೇ ವಿರೋಧಿಗಳ ಟೀಕೆಗಳಿಗೆ ತಕ್ಕ ಉತ್ತರ ಸಿಕ್ಕಂತಾಗುತ್ತದೆ ಎಂದು ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಅಜಿತ್ ಹೆಗ್ಡೆ ಮಾಳ ಹೇಳಿದರು
ಅವರು ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಾ 19 ರಂದು ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ಜನಪರ ಯೋಜನೆಗಳನ್ನು ತಲುಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು. ಇಂತಹ ಮಹತ್ವದ ಸಭೆಗೆ ಕೆಲವು ಅಧಿಕಾರಿಗಳ ಗೈರಾಗಿದ್ದು ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಬಳಿಕ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ
ಗೃಹ ಲಕ್ಷ್ಮೀ ಯೋಜನೆ ಪ್ರಗತಿ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಸಂತಿ ಮಾಹಿತಿ ನೀಡಿ, 35914 ಕಾರ್ಡ್ ಗಳ ಪೈಕಿ 34631 ಫಲಾನುಭವಿಗಳಿಗೆ ಯೋಜನೆ ತಲುಪಿದ್ದು ,ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಲ್ಲಿ ಹೆಸರು ವ್ಯತ್ಯಾಸ ,ಇಕೆವೈಸಿ,ಜಿಎಸ್ ಟಿ ಫೈಲಿಂಗ್ ಸಮಸ್ಯೆಯಿಂದ 1283 ಕಾರ್ಡುಗಳಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಲ್ಲ ಎಂದರು
ಅನ್ನಭಾಗ್ಯ ಯೋಜನೆಯ ಕುರಿತು ಆಹಾರ ನಿರೀಕ್ಷಕಿ ಸುಮತಿ ನಾಯಕ್ ಮಾಹಿತಿ ನೀಡಿ,31555 ಬಿಪಿಎಲ್ ಕಾರ್ಡುಗಳ ಪೈಕಿ 29283 ಕಾರ್ಡುದಾರರಿಗೆ ಯೋಜನೆ ತಲುಪಿದ್ದು,ಉಳಿದ ಕಾರ್ಡುಗಳಲ್ಲಿ ಕುಟುಂಬಸ್ಥರ ಮುಖ್ಯಸ್ಥರು, ಜನ ಆಧಾರ್ ಜೋಡಣೆಯಾಗದ ಹಾಗೂ ಇತರೆ ಕಾರಣದಿಂದ ಯೋಜನೆ ತಲುಪಿಲ್ಲ ಎಂದರು. ಇದಲ್ಲದೇ ತುರ್ತು ವೈದ್ಯಕೀಯ ಕಾರಣದಿಂದ ಪಡಿತರ ಚೀಟಿ ಪಡೆಯಲು ಅವಕಾಶವಿದೆ ಉಳಿದಂತೆ ಹೊಸ ಪಡಿತರ ಚೀಟಿ ನೀಡಲಾಗುತ್ತಿಲ್ಲ ಎಂದು ವಿವರಿಸಿದರು.
ಮೆಸ್ಕಾಂ ಇಲಾಖೆಯ ಎಇಇ ಶಿಲ್ಪಾ ಗೃಹಜ್ಯೋತಿ ಇಲಾಖೆಯ ಮಾಹಿತಿ ನೀಡಿ ಈವರೆಗೆ ಗೃಹಜ್ಯೋತಿ ಯೋಜನೆಯಡಿ ಸುಮಾರು 7.23 ಕೋ.ರೂ ಬಳಕೆಯಾಗಿದೆ ಎಂದರು.
ಇನ್ನುಳಿದಂತೆ ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದ ಗ್ರಾಮಗಳಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅವಕಾಶವಿದೆ ಎಂದು ಅಜಿತ್ ಹೆಗ್ಡೆ ಹೇಳಿದರು. ಕಲ್ಯಾ ಮಾರ್ಗವಾಗಿ ಪಳ್ಳಿ ಮೂಡುಬೆಳ್ಳೆ ಉಡುಪಿ ಮಾರ್ಗದಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಮಿತಿ ಸದಸ್ಯರು ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಇಒ ಶಶಿಧರ್ ಕೆ.ಜಿ ,ತಹಶಿಲ್ದಾರ್ ಪ್ರದೀಪ್ ಕುಮಾರ್ ಆರ್ ಉಪಸ್ಥಿತರಿದ್ದರು.
K