Share this news

ಕಾರ್ಕಳ: ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಕಾರ್ಕಳ ತಾಲೂಕಿನಾದ್ಯಂತ ಅಡಿಕೆ ತೋಟಗಳಲ್ಲಿ ಅಡಿಕೆ ಕೊಳೆ ರೋಗ ಹೆಚ್ಚಾಗಿ ಕಂಡುಬರುತ್ತಿದೆ.ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಮಳೆ ಹಾಗೂ ಬಿಸಿಲು ಮಿಶ್ರಿತ ವಾತಾವರಣ, ಮಣ್ಣಿನಲ್ಲಿ ಹೆಚ್ಚಿದ ತೇವಾಂಶದಿAದಾಗಿ ರೋಗ ಇನ್ನಷ್ಟು ಹೆಚ್ಚಾಗುತ್ತದೆ. ಆದ್ದರಿಂದ ರೈತರು ಬೆಳೆ ಸಂರಕ್ಷಣೆ ಉದ್ದೇಶದಿಂದ ಈ ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾರ್ಕಳ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ ಬಿ.ವಿ ತಿಳಿಸಿದ್ದಾರೆ.

1. ತೋಟದಲ್ಲಿ ಬಿದ್ದ ಕೊಳೆರೋಗ ಭಾದಿತ ಹಾಗೂ ಹಸಿರು ಕಾಯಿಗಳನ್ನು ಹಾಗೂ ಪೂರ್ಣ ಕೊಳೆ ಬಂದು ಒಣಗಿದ ಸಿಂಗಾರಗಳನ್ನು ಸಂಗ್ರಹಿಸಿ ಹೊರ ಸಾಗಿಸಿ ಸುಡಬೇಕು.
2. ತೋಟದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬಸಿಗಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಅಡಿಕೆ ಮರದ ಬುಡ ಭಾಗವು ಸಾಮಾನ್ಯ ಮಟ್ಟಕ್ಕಿಂತ ತಗ್ಗು ಇದ್ದಲ್ಲಿ, ಅಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
3. ತೋಟದಲ್ಲಿ ಹಾಗೂ ಸುತ್ತಲೂ ಬೆಳೆದ ಕಾಡು ಮರಗಳ ರೆಂಬೆಗಳನ್ನು ಕತ್ತರಿಸಿ ತೋಟದಲ್ಲಿ ಸರಿಯಾಗಿ ಗಾಳಿ ಬೆಳಕು ಆಡುವಂತೆ ಕ್ರಮವಹಿಸುವುದು.
4. ಶಿಫಾರಸ್ಸು ಮಾಡಿದ ಪೋಷಕಾಂಶಗಳನ್ನು ನಿಯಮಿತವಾಗಿ ಒದಗಿಸುವುದು.
5. ಕೊಳೆ ರೋಗ ಭಾದಿತ ತೋಟಗಳಲ್ಲಿ ತುರ್ತು ನಿಯಂತ್ರಣಕ್ಕಾಗಿ ಮೆಟಲಾಕ್ಸೆಲ್ 35% ಶಿಲೀಂದ್ರ ನಾಶಕವನ್ನು 1.50 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪರಣೆ ನಂತರ ಕನಿಷ್ಠ 2 ಗಂಟೆಗಳ ಮಳೆ ರಹಿತ ವಾತಾವರಣ ಅವಶ್ಯ. ಒಂದು ವಾರದ ನಂತರ ಶೇ. 1ರ ಬೋರ್ಡೋ ದ್ರಾವಣ ಸಿಂಪರಣೆ ಕೈಗೊಳ್ಳಬೇಕು.
ಅಲ್ಲದೇ ಕೊಳೆ ಭಾದಿತ ತೋಟಗಳಲ್ಲಿ ಈ ಮೇಲಿನ ಸಿಂಪರಣೆಗಳನ್ನು ಕೈಗೊಳ್ಳುವಾಗ ಅಡಿಕೆ ಗೊನೆಗಳಿಗೆ ಮಾತ್ರ ಸಿಂಪಡಿಸದೇ ಸುಳಿ, ಸೋಗೆ ಹಾಗೂ ಹೊಡೆ ಭಾಗಗಳಿಗೂ ಸಿಂಪಡಿಸುವುದರಿAದ ಮುಂದೆ ಬರುವ ಶಿರ ಕೊಳೆರೋಗ ಹಾಗೂ ಸುಳಿ ಕೊಳೆರೋಗಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಶ್ರೀನಿವಾಸ ಬಿ.ವಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *