Share this news

ಕಾರ್ಕಳ: ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಕುಂಟಲಪಾಡಿ ಎಂಬಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ದಾಳಿ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅ.23 ರಂದು ಕುಂಟಲ್ಪಾಡಿಯ ಸರಕಾರಿ ಜಾಗದ ಸ.ನಂ 243/1 ರಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ದಾಳಿ ನಡೆಸಿದ್ದಾರೆ.
ಈ ವೇಳೆ ಭೋಜ ಶೆಟ್ಟಿ ಎಂಬವರು ಸುಮಾರು 3,500/- ರೂ. ಮೌಲ್ಯದ 300 ಸೈಜು ಶಿಲೆ ಕಲ್ಲುಗಳನ್ನು ಮಾರಾಟಕ್ಕಾಗಿ ಸಂಗ್ರಹ ಮಾಡಿದ್ದು, ಸುಮಾರು 150 ಸೈಜು ಕಲ್ಲುಗಳನ್ನು ಸಾಗಾಟಕ್ಕಾಗಿ ಲಾರಿಯಲ್ಲಿ ಲೋಡು ಮಾಡಿದ್ದರು. ಪೊಲೀಸರು ಸೈಜು ಕಲ್ಲು, ಲಾರಿ,ಕಬ್ಬಿಣದ ಸುತ್ತೆ, ಕಬ್ಬಿಣದ ಚಮ್ಮಡಿ ವಶಪಡಿಸಿಕೊಂಡು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *