ಕಾರ್ಕಳ: ಕಾರ್ಕಳ ಮೆಸ್ಕಾಂ ಕಚೇರಿಯ ಅಕೌಂಟೆಂಟ್ ಆಫೀಸರ್ ಆಗಿರುವ ಕಾರ್ಕಳ ಹಿರಿಯಂಗಡಿಯ ಗಿರೀಶ್ ರಾವ್ ಮನೆ,ಮೆಸ್ಕಾಂ ಕಚೇರಿ, ಪುಲ್ಕೇರಿಯ ಕಾರ್ಕಳ ಇನ್ ಲಾಡ್ಜ್,ಹೊಟೇಲ್ ಅನಘಾ, ತಾಯಿ ಹಾಗೂ ಸಹೋದರಿಯ ಮನೆ ಸೇರಿದಂತೆ ಒಟ್ಟು 5 ಕಡೆಗಳಲ್ಲಿ ಉಡುಪಿ ಲೋಕಾಯುಕ್ತ ಪೊಲೀಸರ ತಂಡ ಶನಿವಾರ ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿ ಆಸ್ತಿ ದಾಖಲೆಪತ್ರಗಳು ಹಾಗೂ ಚಿನ್ನಾಭರಣಗಳನ್ನು ಪರೀಲನೆ ನಡೆಸಿದೆ.
ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ನೇತ್ರತ್ವದಲ್ಲಿ ಶನಿವಾರ ಮುಂಜಾನೆ 7 ಗಂಟೆ ಸುಮಾರಿಗೆ ದಾಳಿ ನಡೆದಿದ್ದು,ಶನಿವಾರ ಬೆಳಗ್ಗಿನಿಂದ ರಾತ್ರಿವರೆಗೂ ಅಸ್ತಿ ದಾಖಲೆಗಳ ಶೋಧ, ಪರಿಶೀಲನೆ ನಡೆಸಿದೆ.
ಲೋಕಾ ದಾಳಿಯಲ್ಲಿ ಗಿರೀಶ್ ರಾವ್ ಅವರಿಗೆ ಸಂಬಂಧಿಸಿದ ನಗದು ,ಮನೆ, ಬಿಲ್ಡಿಂಗ್, ಸೈಟ್, ಚಿನ್ನಾಭರಣ ಸೇರಿ 3 ಕೋಟಿ ರೂ ಮಿಕ್ಕಿ ಆದಾಯಕ್ಕೆ ಮೀರಿದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.