ಕಾರ್ಕಳ: ದಿ ಯಶವಂತಿ ಎಸ್. ಸುವರ್ಣ ಇವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ದಿ. ಯಶವಂತಿ ಸುವರ್ಣರ ಪುತ್ರಿ ಎಂ ಜಿ ಎಂ ಕಾಲೇಜಿನ ನಿವೃತ್ತ ಪ್ರಾದ್ಯಾಪಿಕೆ ಪ್ರೊ. ಉಷಾರಾಣಿ ಎಸ್. ಸುವರ್ಣ ಇವರ ಪ್ರಾಯೋಜಕತ್ವ ಹಾಗೂ ಆದಿತ್ಯ ಟ್ರಸ್ಟ್ (ರಿ )ನಕ್ರೆ ಇವರ ಸಹಯೋಗದಲ್ಲಿ ಅವರ ಸ್ವಗೃಹ ನಂದರಬೆಟ್ಟು ನಂದಾದೀಪ ದಲ್ಲಿ ನಕ್ರೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ದಿ. ಯಶವಂತಿ ಎಸ್. ಸುವರ್ಣರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಕ್ರೆ ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಅಧ್ಯಾಪಕರಾದ ಶಂಕರ ಪೂಜಾರಿ ಮಾತನಾಡಿ, ದಿ. ಯಶವಂತಿ ಎಸ್. ಸುವರ್ಣರು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮ, ಧಾರ್ಮಿಕ, ರಾಜಕೀಯ, ಸಾಹಿತ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಜನಮನ್ನಣೆ ಗಳಿಸಿದ್ದಾರೆ. ಮುಖ್ಯವಾಗಿ ಸ್ತ್ರೀ ಸಮಾನತೆ, ಸಾಕ್ಷರತೆ ಆಂದೋಲನದ ಮೂಲಕ ಒಬ್ಬ ನಿಷ್ಠಾವಂತ ವ್ಯಕ್ತಿಯಾಗಿ ಸಮಾಜ ಸೇವೆಯನ್ನು ಮಾಡಿರುತ್ತಾರೆ, ಅನೇಕ ಪುಸ್ತಕ ಗಳನ್ನು ಬರೆಯುವುದರ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿರುತ್ತಾರೆ ಎಂದು ಅವರನ್ನು ಸ್ಮರಿಸಿದರು.
ಮಂಜುನಾಥ್ ಪ್ರಭು ಆದಿತ್ಯ ಟ್ರಸ್ಟ್ ಗ್ರಾಮೀಣ ಭಾಗದಲ್ಲಿರುವ ವಿಕಲ ಚೇತನರ ಪುನರ್ವಸತಿಗೆ ಕೈಗೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ. ಉಷಾರಾಣಿ, ನಕ್ರೆ ಪ್ರೌಢಶಾಲೆಯ ಅಧ್ಯಾಪಕಿ ಬೆನೆಡಿಕ್ಟ್ ಪಿಂಟೋ, ಉಡುಪಿ ಎಸ್.ಪಿ ಕಚೇರಿ ನಿವೃತ್ತ ಆಡಳಿತಾಧಿಕಾರಿ ದಿವಾಕರ ಪೂಜಾರಿ, ಉಪಸ್ಥಿತರಿದ್ದರು. ಆದಿತ್ಯ ಟ್ರಸ್ಟ್ ನ ರಮೇಶ್ ನಕ್ರೆ ಕಾರ್ಯಕ್ರಮ ನಿರ್ವಹಿಸಿದರು.
`