Share this news

 

 

 ಉಡುಪಿ : ರಾತ್ರಿ ಹೊತ್ತಿನಲ್ಲಿ ಐವತ್ತು ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿ, ಆತಂಕ ಸೃಷ್ಟಿಸಿದ ಅಪರಿಚಿತ ಯುವಕನನ್ನು ವಶಕ್ಕೆ ಪಡೆದು ಮಣಿಪಾಲ ಪೋಲಿಸ್ ಠಾಣೆಗೆ ಒಪ್ಪಿಸಿರುವ ಘಟನೆ ಬುಧವಾರ ನಡೆದಿದೆ

80 ಬಡಗುಬೆಟ್ಟು ಶಾಂತಿನಗರದಲ್ಲಿ ಸಮಾಜಸೇವಕ ನಿತ್ಯಾನಂದ ಮನೆಯ ಹಿಂಬಾಗದ ರಸ್ತೆಯಲ್ಲಿ ಘಟನೆ ನಡೆದಿರುವುದು. ಯುವಕ ಟ್ಯಾಂಕನ್ನು ಹತ್ತಿರುವುದು ಆತ್ಮಹತ್ಯೆಗೈಯಲೋ, ಅಥವಾ ಮಾನಸಿಕ ಖಿನ್ನತೆಯಿಂದ ಹತ್ತಿರುವುದೋ ಎಂದು ಸ್ವಷ್ಟವಾಗಿ ತಿಳಿದುಬಂದಿಲ್ಲ.

ಸಾರ್ವಜನಿಕರು ನೀಡಿದ ದೂರಿನಂತೆ ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ,‌ಮಣಿಪಾಲ ಪೋಲಿಸರು ಬಂದಿದ್ದಾರೆ. ಈ ಸಂದರ್ಭ ಸ್ಥಳೀಯರಾದ ಅರ್ಮುಗಂ , ಹರೀಶ್ ಶೆಟ್ಟಿಯವರು ಏಣಿ ಬಳಸಿಕೊಂಡು ಟ್ಯಾಂಕ್ ಮೇಲೆ ಹತ್ತಿ ಯುವಕನ ಮನವೊಲಿಸಿ ಕೆಳಗೆ ಕರೆತರಲು ಅಗ್ನಿಶಾಮಕ ದಳದವರಿಗೆ ಸಾಥ್ ನೀಡಿದ್ದಾರೆ. ಸ್ಥಳದಲ್ಲಿ ನೂರಾರು ಸಾರ್ವಜನಿಕರು ಕಾರ್ಯಚರಣೆ ಕಾಣಲು ಸೇರಿದ್ದರು. ಮಣಿಪಾಲ ಪೋಲಿಸ್ ಠಾಣೆಯ‌ ಎ ಎಸ್ ಐ ರಾಮಪ್ರಭು, ಶಂಕರ್, ಅಗ್ನಿಶಾಮಕ ದಳ ದ ಸಿಬ್ಬಂದಿಗಳು ಸ್ಥಳದಲ್ಲಿದ್ದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಕಾರ್ಯಚರಣೆಗೆ ನೆರವಾದರು. ಪೊಲೀಸರ ವಿಚಾರಣೆಯ ಬಳಿಕ ರಕ್ಷಿಸಲ್ಪಟ್ಟ ಯುವಕ ಗದಗದ ಲಕ್ಷ್ಮಣ್ ಬಸವರಾಜ್ ಕೊಷ್ಟಿ ಎಂದು ತಿಳಿದುಬಂದಿದೆ.

 

 

 

 

 

 

 

 

 

 

Leave a Reply

Your email address will not be published. Required fields are marked *