ಕಾರ್ಕಳ: ಸಾಣೂರು ಗೇರು ಬೀಜ ಕಾರ್ಖಾನೆಯ ಸಮೀಪದ ಮನೆಯೊಂದರ ಕುಡಿಯುವ ನೀರಿನ 35 ಅಡಿ ಆಳದ ಬಾವಿಯನ್ನು ಸ್ವಚ್ಛಗೊಳಿಸಲು ಬಾವಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಮೇಲಕ್ಕೆ ಬರಲಾಗದೇ ಪರದಾಡಿದ್ದು,ಬಳಿಕ ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯ ಮೂಲಕ ವ್ಯಕ್ತಿಯನ್ನು ಮೇಲಕ್ಕೆ ತರಲಾಗಿದೆ.
ಹರೀಶ್ ಆಚಾರ್ಯ ಎಂಬವರು ಬಾವಿಯನ್ನು ಸ್ವಚ್ಛಗೊಳಿಸಲು ಬಾವಿಗೆ ಇಳಿದಿದ್ದರು.ಬಾವಿ ಸ್ವಚ್ಛಗೊಳಿಸಿ ಮೇಲಕ್ಕೆ ಬರಲು ಪ್ರಯತ್ನಿಸಿ ವಿಫಲರಾದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹರೀಶ್ ಆಚಾರ್ಯ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ
ಈ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್,ಸಿಬ್ಬಂದಿಗಳಾದ ಅಚ್ಚುತ ಕರ್ಕೇರ ,ಹರಿಪ್ರಸಾದ್ ಶೆಟ್ಟಿಗಾರ್, ಜಯ ಮೂಲ್ಯ,ಮುಝಾಮಿಲ್, ಗಣೇಶ ಆಚಾರ್ಯ,ಭೀಮಪ್ಪ ರವರು ಭಾಗವಹಿಸಿದ್ದರು.