Share this news

ಹೆಬ್ರಿ: ಹೆಬ್ರಿ ತಾಲೂಕಿನ ಶಿವಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಸರ್ಕಾರದಿಂದ ಮಂಜೂರಾದ ಹಾಗೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ ಜಾಗವನ್ನು ಬಳಕೆ ಮಾಡಲು ಅಡ್ಡಿಪಡಿಸಿ, ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ.
ಶಿವಪುರ ಗ್ರಾಮದ ದೋರಿಯಲು ಎಂಬಲ್ಲಿ ಹೊನ್ನಿ ಎಂಬವರು ಸರ್ವೆ ನಂಬರ್-293/5ಪಿ1 ರಲ್ಲಿ 0.05 ಎಕರೆ ಸರಕಾರಿ ಸರಕಾರಿ ಜಾಗದಲ್ಲಿ ವಾಸ ಮಾಡಿಕೊಂಡಿದ್ದು ಜಾಗವನ್ನು ಹೆಬ್ರಿ ತಾಲೂಕು ತಹಶಿಲ್ದಾರರು ನಿವೇಶನ ಹಕ್ಕಿನಡಿ ಮಂಜುರು ಮಾಡಿರುತ್ತಾರೆ. ಆ ಜಾಗಕ್ಕೆ ಹೊಂದಿಕೊAಡಿರುವ ಅಂದಾಜು 02.50 ಎಕ್ರೆ ಸರಕಾರಿ ಜಾಗವೂ ಸಹ ಹೊನ್ನಿ ಅವರ ಸ್ವಾದೀನತೆಯಲ್ಲಿ ಇದ್ದು, ಇದರ ಮಂಜುರಾತಿಗಾಗಿ ಸಕ್ಷಮ ಪ್ರಾಧಿಕಾರದಲ್ಲಿ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಆದರೆ ಆ ಜಾಗದ ಪಕ್ಕದ ಜಾಗದವರಾದ ಸುರೇಂದ್ರ ಅವರು ಹೊನ್ನಿ ಅವರ ಜಾಗಕ್ಕೆ ಸಂಪರ್ಕಿಸುವ ದಾರಿಯನ್ನು ಬಂದ್ ಮಾಡಿದ್ದು ಜಾಗಕ್ಕೆ ಹೋಗುವ ರಸ್ತೆ ನಾಶ ಮಾಡಿ,ಅಗೆದು ಹಾಕಿ ಗಡಿಗಳನ್ನು ನಾಶ ಮಾಡಿ ಮರ ಗಿಡಗಳನ್ನು ಕಿತ್ತು ಹಾಕಿದ್ದು ಸುಮಾರು 50,000 ನಷ್ಟವಾಗಿರುತ್ತದೆ. ಈ ಬಗ್ಗೆ ಸುರೇಂದ್ರರಲ್ಲಿ ಕೇಳಿದಾಗ ಹೊನ್ನಿ ಅವರು ಆ ಜಾಗ ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದರು. ಅಲ್ಲದೇ ಆ.11 ರಂದು ಸುರೇಂದ್ರ ಅವರು ಹೊನ್ನಿ ಅವರ ಸಂಪರ್ಕ ರಸ್ತೆ ಸೇರಿಸಿಕೊಂಡು ತಂತಿಬೇಲಿ ಹಾಕುತ್ತಿದ್ದ ಸಂದರ್ಭ ಹೊನ್ನಿ ಅವರು ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಿದ್ದಾರೆಂದು ಹೊನ್ನಿ ಹೆಬ್ರಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *