ಕಾರ್ಕಳ : ಕಾರ್ಕಳ ತಾಲೂಕಿನ ಕಾಂತಾವರದ ಬೇಲಾಡಿ ಬಾವ ಕೃಷಿಕ ಅಶೋಕ್ ಶೆಟ್ಟಿಯವರ ಕಂಬಳದ ಕೋಣಗಳಿದ್ದ ಹಟ್ಟಿಯಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅನಾಹುತ ಉಂಟಾಗಿದ್ದು ಹಟ್ಟಿಯಲ್ಲಿ ಕಟ್ಟಿಹಾಕಲಾಗಿದ್ದ ಎರಡು ಕಂಬಳ ಕೋಣಗಳು ಸುಟ್ಟು ಕರಕಲಾಗಿವೆ. ಥೊನ್ಸೆ ಮತ್ತು ಅಪ್ಪು ಭೀಕರ ಬೆಂಕಿಗೆ ಬಲಿಯಾದ ಕೋಣಗಳು. ಈ ಕೋಣಗಳು ಸ್ಥಳೀಯ ಹಾಗೂ ಜಿಲ್ಲಾಮಟ್ಟದ ಕಂಬಳಗಳಲ್ಲಿ ಹಲವು ಬಹುಮಾನಗಳನ್ನು ಗೆದ್ದಿದ್ದವು.
ಶುಕ್ರವಾರ ರಾತ್ರಿ ಕೋಣಗಳು ಇರುವ ಹತ್ತಿರದ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಹಟ್ಟಿಗೆ ತಾಗಿರುವಂತೆ ಭತ್ತದ ಬಣವೆ ಇದ್ದ ಕಾರಣ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಹಟ್ಟಿಗೆ ವ್ಯಾಪಸಿದ್ದು, ಧಗಧಗನೆ ಉರಿದ ಬೆಂಕಿಗೆ ಕೋಣಗಳು ಸುಟ್ಟು ಕರಕಲಾಗಿರುವ ದೃಶ್ಯ ಕರುಳು ಹಿಂಡುವAತಿದೆ.
ಈ ಕಂಬಳ ಕೋಣಗಳನ್ನು ಮಾಲೀಕ ಅಶೋಕ್ ಶೆಟ್ಟಿ ಬಹಳ ಪ್ರೀತಿಯಿಂದ ಬೆಳೆಸಿದ್ದರು. ಇವುಗಳು ಇಡೀ ಗ್ರಾಮಸ್ಥರಿಗೆ ಅಚ್ಚುಮೆಚ್ಚಾಗಿದ್ದು, ಇದೀಗ ಕೋಘನಳ ದಾರುಣ ಸಾವಿಗೆ ಇಡೀ ಗ್ರಾಮವೇ ಕಣ್ಣೀರಿಡುತ್ತಿದೆ. ಥೊನ್ಸೆ ಮತ್ತು ಅಪ್ಪು ಕೇವಲ ಕೋಣಗಳು ಅಲ್ಲ. ಅವು ನಮ್ಮ ಕುಟುಂಬದ ಸದಸ್ಯರಂತಾಗಿದ್ದವು. ಇಂತಹ ಘಟನೆ ನಡೆದಿದೆ ಎನ್ನುವುದನ್ನು ಅರಗಿಸಿಕೊಳ್ಳಲುಸಾಧ್ಯವಾಗುತ್ತಿಲ್ಲ ಎಂದು ಅಶೋಕ್ ಶೆಟ್ಟಿ ಕಣ್ಣೀರಿಡುತ್ತಿದ್ದಾರೆ.
.