Share this news

ಹೆಬ್ರಿ: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಬಸ್ ಕಂಡಕ್ಟರ್ ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ರಿ ತಾಲೂಕಿನ ಸೀತಾನದಿ ಎಂಬಲ್ಲಿ ಸಂಭವಿಸಿದೆ.
ಬುಧವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದ್ದು, ಉಡುಪಿಯಿಂದ ಕೊಪ್ಪದ ಕಡೆಗೆ ಹೋಗುತ್ತಿದ್ದ ಹರ್ಷಿತ ಎಂಬ ಖಾಸಗಿ ಮಿನಿ ಬಸ್ಸಿನ ಕಂಡಕ್ಟರ್ ಶಿವರಾಜ್ ಎಂಬವರು ಬಸ್ಸಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಅವರು ಬಸ್ಸಿನ ಎದುರುಗಡೆಯ ಬಾಗಿಲಿನ‌ ಬಳಿ‌ ನಿಂತಿದ್ದಾಗ ಏಕಾಎಕಿ ಬಿಪಿ ಕಡಿಮೆಯಾಗಿ ಚಲಿಸುತ್ತಿದ್ದ ಬಸ್ಸನಿಂದ ಕೆಳಕ್ಕೆ ಬಿದ್ದ ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

                        

                          

 

 

 

 

 

                        

                          

 

Leave a Reply

Your email address will not be published. Required fields are marked *