ಹೆಬ್ರಿ: ಗಂಡ ಹಾಗೂ ಅತ್ತೆಯ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾರ ಗ್ರಾಮದ ವಿವಾಹಿತೆ ಕಾವೇರಿ ಎಂಬವರು ಹೆಬ್ರಿ ಪೊಲೀಸ್ ಠಾಣೆಗೆ ವರದಕ್ಷಿಣೆ ಕಿರುಕುಳ ಹಾಗೂ ದೈಹಿಕ,ಮಾನಸಿಕ ಕಿರುಕುಳದ ಆರೋಪ ನೀಡಿರುವ ಪ್ರಕರಣದ ಕುರಿತಂತೆ ಈ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ.
ಈ ಪ್ರಕರಣ ನಡೆದು ಒಂದು ತಿಂಗಳ ಬಳಿಕ ಮತ್ತೆ ಕೌಟುಂಬಿಕ ಕಲಹ ಭುಗಿಲೆದಿದ್ದು, ಸೊಸೆ ಕಾವೇರಿ ತನ್ನ ಜತೆ ಶಿವರಾಜ,ಮಂಜುನಾಥ, ಸಂತೋಷ, ಲಲಿತಾ ಎಂಬವರ ಜತೆ ಸೇರಿ ಮಾರಕಾಸ್ತ್ರಗಳೊಂದಿಗೆ ಅತ್ತೆ ಶಾರದ ಅವರ ಮನೆಗೆ ನುಗ್ಗಿ ಶಾರದ ಅವರ ಕುತ್ತಿಗೆ ಹಿಸುಕಿ,ಕೈಗೆ ಚಾಕುವಿನಿಂದ ಇರಿದು,ಬಳಿಕ ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿದ್ದಾರೆ,ಮಾತ್ರವಲ್ಲದೇ ಶಾರದ ಅವರ ಮಗನಿಗೂ ಹಲ್ಲೆ ನಡೆಸಿ, ಮನೆಯಲ್ಲಿದ್ದ 50 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುವುದಾಗಿ ಶಾರದ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.