ಕಾರ್ಕಳ : ಕಾರ್ಕಳದ ಪೆರ್ವಾಜೆ ಶ್ರೀ ಕ್ಷೇತ್ರ ಬ್ರಹ್ಮಸ್ಥಾನ ಅಭ್ಯುದಯ ಸಮಿತಿಯಿಂದ 25ನೇ ವರ್ಷದ ಕಲ್ಲೊಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಪುನಃ ಪ್ರತಿಷ್ಠಾಪನಾ ರಜತ ಮಹೋತ್ಸವ ಬ್ರಹ್ಮಮಂಡಲ ಸೇವೆಯು ಮೇ 10 ಹಾಗೂ 11 ರಂದು ನಡೆಯಲಿದೆ.
ಮೇ 10 ಶನಿವಾರದಂದು ಚಂಡಿಕಾಯಾಗ, ಹಾಲಿಟ್ಟು ಸೇವೆ, ಬ್ರಹ್ಮ ಮಂಡಲ ಸೇವೆ ಹಾಗೂ ಅನ್ನಸಂಪರ್ಪಣೆ ನಡೆಯಲಿದೆ. ಮೇ 11 ರವಿವಾರದಂದು ಸಾರ್ವಜನಿಕ ಶನೈಶ್ಚರ ಪೂಜೆ, ಅನ್ನ ಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅಧ್ಯಕ್ಷರಾದ ವಿಜಯ್ ಶೆಟ್ಟಿ ಕಾರ್ಕಳ ಈ ಮೂಲಕ ತಿಳಿಸಿದ್ದಾರೆ.