ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಟರ್ಕಿಯು ಪಾಕಿಸ್ತಾನದ ಪರವಾಗಿ ನಿಂತಿದ್ದಕ್ಕಾಗಿ ಉದಯಪುರ ಅಮೃತಶಿಲೆ ವ್ಯಾಪಾರಿಗಳು ಟರ್ಕಿಯೊಂದಿಗಿನ ಎಲ್ಲಾ ವ್ಯವಹಾರವನ್ನು ಕೊನೆಗೊಳಿಸಿದ್ದಾರೆ. ಉದಯಪುರ ಮಾರ್ಬಲ್ ಪ್ರೊಸೆಸರ್ಸ್ ಸಮಿತಿಯ ಅಧ್ಯಕ್ಷ ಕಪಿಲ್ ಸುರಾನಾ ಈ ಕುರಿತು ಪ್ರತಿಕ್ರಿಯಿಸಿದ್ದು, “ಉದಯಪುರವು ಏಷ್ಯಾದ ಅತಿದೊಡ್ಡ ಅಮೃತಶಿಲೆಯ ಆಮದುದಾರ ನಗರವಾಗಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡುವುದರಿಂದ ಟರ್ಕಿಯೊಂದಿಗಿನ ವ್ಯಾಪಾರವನ್ನು ನಿಲ್ಲಿಸಲು ಸಮಿತಿಯ ಎಲ್ಲಾ ಸದಸ್ಯರು ಸರ್ವಾನುಮತದಿಂದ ಒಪ್ಪಿಕೊಂಡಿದ್ದರು. ಭಾರತಕ್ಕೆ ಆಮದು ಮಾಡಿಕೊಳ್ಳುವ ಅಮೃತಶಿಲೆಯ ಶೇ 70ರಷ್ಟು ಟರ್ಕಿಯಿಂದ ಬರುತ್ತದೆ. ಉದಯಪುರ ಮಾತ್ರವಲ್ಲದೇ ದೇಶದ ಎಲ್ಲಾ ಅಮೃತಶಿಲೆ ಸಂಘಗಳು ಟರ್ಕಿಯೊಂದಿಗಿನ ತಮ್ಮ ವ್ಯಾಪಾರವನ್ನು ನಿಲ್ಲಿಸಿದರೆ, ಭಾರತ ಸರ್ಕಾರವು ಒಂಟಿಯಾಗಿಲ್ಲ, ಕೈಗಾರಿಕೆಗಳು ಮತ್ತು ಎಲ್ಲಾ ಭಾರತೀಯರು ನಮ್ಮ ಸರ್ಕಾರದ ಜೊತೆ ನಿಂತಿದ್ದಾರೆ ಎಂಬ ಬಲವಾದ ಸಂದೇಶವನ್ನು ಅದು ಜಗತ್ತಿಗೆ ನೀಡುವುದು ನಮ್ಮ ಉದ್ಧೇಶವಾಗಿದೆ.ಅಲ್ಲದೇ ಕೇಂದ್ರ ಸರ್ಕಾರದ ಜತೆ ನಾವು ಇದ್ದೇವೆ ಎಂದು ಮಾರ್ಬಲ್ ಆಮದುದಾರರು ಹೇಳಿಕೆ ನೀಡಿದ್ದು, ಟರ್ಕಿಯೊಂದಿಗಿನ ವ್ಯಾಪಾರವನ್ನು ನಿಲ್ಲಿಸಿದರೆ, ಭಾರತೀಯ ಅಮೃತಶಿಲೆಗೆ ಬೇಡಿಕೆ ಬರುತ್ತದೆ.