Share this news

ಕಾರ್ಕಳ : ತಾಲೂಕಿನ ಅಂಡಾರು ಕರಿಯಾಲು ಶ್ರೀ ವಿಠಲ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.21 ರಿಂದ ಮಾ.1 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಪ್ರಯುಕ್ತ ಹಸಿರು ಹೊರೆ ಕಾಣಿಕೆ ಮೆರವಣಿಗೆ ಫೆ.19ರಂದು ನಡೆಯಿತು.
ಈ ಸಂದರ್ಭ ಶ್ರೀ ವಿಠಲ ದೇವರ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.
ಹಸಿರು ಹೊರೆ ಕಾಣಿಕೆ ಸಲುವಾಗಿ ಅಂಡಾರು ಶಿರ್ಲಾಲು ಗ್ರಾಮಸ್ಥರು ಹಸಿರು ಹೊರೆಕಾಣಿಕೆ ಅರ್ಪಿಸಿದರು.


ಶಿರ್ಲಾಲು ಗ್ರಾಮಸ್ಥರು ಶಿರ್ಲಾಲು ಬಸದಿಯಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಹೊರಟು ಅಂಡಾರು ಮಲಡ್ಕ ಪೇಟೆಯಲ್ಲಿ ಅಂಡಾರು ಗ್ರಾಮಸ್ಥರ ಹೊರೆ ಕಾಣಿಕೆಯೊಂದಿಗೆ ಕರಿಯಾಲು ದೇವಸ್ಥಾನದ ವರೆಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಭಜನಾ ತಂಡಗಳಿAದ ಭಜನೆ, ವಾದ್ಯ, ಚೆಂಡೆವಾದನ ಮೆರವಣಿಗೆಯ ಆಕರ್ಷಣೆಯಾಗಿತ್ತು.
ಈ ಸಂದರ್ಭ ಆಡಳಿತ ಮಂಡಳಿಯವರು, ಜೀರ್ಣೋದ್ಧಾರ ಸಮಿತಿಯವರು, ಬ್ರಹ್ಮಕಲಶೋತ್ಸವ ಸಮಿತಿಯವರು, ಟ್ರಸ್ಟ್ ನವರು, ಅಭಿವೃದ್ಧಿ ಸಮಿತಿಯವರು, ಗ್ರಾಮಸ್ಥರು ಭಾಗವಹಿಸಿದ್ದರು.
ಭಕ್ತರು ಅಕ್ಕಿ, ಸಿಯಾಳ, ತರಕಾರಿ, ಅಡಿಕೆ, ಹೂ, ಎಣ್ಣೆ ಸೇರಿದಂತೆ ದವಸ ಧಾನ್ಯಗಳನ್ನು ಅರ್ಪಿಸಿದರು.

Leave a Reply

Your email address will not be published. Required fields are marked *