ಕಾರ್ಕಳ: ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಇಂದು (ಬುಧವಾರ) ಸಂಜೆ 6 ರಿಂದ ಅಜೆಕಾರು ಪೇಟೆಯಲ್ಲಿ ಭಾರತ ಜನನಿ ಎಂಬ ವಿನೂತನ ಸೂಪರ್ ಹಿಟ್ ಯಕ್ಷ ಕಥಾನಕ ಪ್ರದರ್ಶನ ನಡೆಯಲಿದೆ.
ಈ ಯಕ್ಷಗಾನ ಬಯಲಾಟಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಶ್ರೀರಾಮ ಯಕ್ಷ ಕಲಾಭಿಮಾನಿಗಳ ಬಳಗ ಅಜೆಕಾರು ಇದರ ಅಧ್ಯಕ್ಷರಾದ ರತ್ನಾಕರ ಅಮೀನ್ ವಿನಂತಿಸಿಕೊಂಡಿದ್ದಾರೆ.