ಕಾರ್ಕಳ: ತಾಲೂಕಿನ ಕಲ್ಯಾ ಗ್ರಾಮದ ಕೈರಬೆಟ್ಟು ಪರಿಸರದ ಸುಮಾರು 7 ಜನ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಾಲೇಶ್ ಕುಮೆರೊಟ್ಟು, ಜಯ ನಾಯಕ್ ಕೈರಬೆಟ್ಟು, ಶೀನ ನಾಯಕ್ ಶೇಡಿ ಬಾಕ್ಯಾರು ರಾಧ ಕೈರಬೆಟ್ಟು, ಸುಪ್ರೀತ ಕೈರಬೆಟ್ಟು, ಮೂರ್ತಿ ನೆಲ್ಲಿಗುಡ್ಡೆ, ನಾಗರಾಜ್ ಕೈರಬೆಟ್ಟು, ಮೊದಲಾದವರು ಸ್ವ- ಇಚ್ಛೆಯಿಂದ ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಸುಮಿತ್ ಶೆಟ್ಟಿ, ಕಲ್ಯಾ ಗ್ರಾ.ಪಂ. ಅಧ್ಯಕ್ಷರಾದ ಸಂಜೀವ ಶೆಟ್ಟಿ, ಉಪಾಧ್ಯಕ್ಷರಾದ ಸುಪ್ರಿಯಾ ಕೋಟ್ಯಾನ್, ಪ್ರಮುಖರಾದ ಕೃಷ್ಣರಾಜ ರೈ ಕುಂಟಾಡಿ, ರವಿರಾಜ ಉಪಾಧ್ಯಾಯ, ನಾಗಭೂಷಣ್, ಸುನಿಲ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.