ಕಾರ್ಕಳ: ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ನ್ಯಾನೋ ಕಥಾಗೋಷ್ಠಿ ಕಾರ್ಯಕ್ರಮವು ವನಿತಾ ಸಮಾಜದಲ್ಲಿ ನಡೆಯಿತು.
ಸಂಘನೆಯ ಸದಸ್ಯೆಯರಾದ ಶ್ಯಾಮಲಾ ಗೋಪೀನಾಥ್,ಸಾವಿತ್ರಿ ಮನೋಹರ್,ಮಿತ್ರಪ್ರಭಾ ಹೆಗ್ಡೆ, ಮಾಲತಿ ಜಿ.ಪೈ, ಇಂದಿರಾ.ಕೆ ತಮ್ಮ ಸ್ವ- ರಚಿತ ಕತೆಗಳನ್ನು ವಾಚಿಸಿದರು.
ಸುಲೋಚನ ತಿಲಕ್ ಪ್ರಾರ್ಥಿಸಿದರು. ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ, ಮನೀಷ ಕಾಮತ್ ವಂದಿಸಿದರು.