ಕಾರ್ಕಳ: ಕಾರ್ಕಳ ತಾಲೂಕಿನ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಜ.22 ಪ್ರತಿಷ್ಠಾ ಮಹೋತ್ಸವದಂದು ಸಂಜೆ 5.30ರಿಂದ ಶ್ರೀ ರವಿಶಂಕರ್ ಗುರುದೇವರ ಆಶೀರ್ವಾದದೊಂದಿಗೆ ಸ್ವಾಮಿ ಶ್ರೀ ಸೂರ್ಯ ಪಾದ ರಿಂದ ಸತ್ಸಂಗ ಲಹರಿ (ಗಾನ- ಜ್ಞಾನ -ಧ್ಯಾನ) ರಸಸಂಜೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.