Share this news

ಕಾರ್ಕಳ : ಶ್ರೀ ಉಚ್ಚಂಗಿ ಮಾರಿಗುಡಿ ಕೌಡೂರು ಬೈಲೂರು ಇಲ್ಲಿ ನೂತನವಾಗಿ ಪ್ರಾರಂಭವಾದ ಶ್ರೀ ಉಚ್ಚಂಗಿ ಮಾರಿಯಮ್ಮ ಕುಣಿತ ಭಜನಾ ಮಂಡಳಿಯನ್ನು ಮಹಾಬಲ ಗೌಡ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಹಿರಿಯರಾದ ಸದಾನಂದ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕರ್ವಾಲು ಹರಿಶ್ಚಂದ್ರ ರಾವ್, ಜಯ ಕೆ, ಸದಾನಂದ ರಾಣೆ, ಹರೀಶ್ ಯಜಮಾನ, ಕುಟ್ಟಿ ಕಂಪನ್,ದಿವಾಕರ ಬಿರಾಣ್ಕೆ, ನಾಥು, ಅಶೋಕ, ರಾಜೇಶ್ ಕಂಪಾನ್,ನಿರಂಜನ್, ದೇವಸ್ಥಾನದ ಪದಾಧಿಕಾರಿಗಳು, ಭಜನಾ ಮಂಡಳಿಯ ಸದಸ್ಯರು, ಪೋಷಕರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ಕುಣಿತ ಭಜನಾ ತರಭೇತಿ ನೀಡಿದ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ ಇವರಿಗೆ ಗುರುಕಾಣಿಕೆ ನೀಡಿ ಗೌರವಿಸಲಾಯಿತು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *