ಮೂಡುಬಿದಿರೆ: ಎಕ್ಸಲೆಂಟ್ ಮೂಡುಬಿದಿರೆ ಸ್ವಸ್ಥ ಸಮಾಜದೆಡೆ ನಮ್ಮ ನಡೆ ಸ್ವಾಸ್ಥ÷್ಯ ಸಂಕಲ್ಪ ಮತ್ತು ಸ್ವಚ್ಛತಾ ಅಭಿಯಾನದಡಿ ಪುರಸಭೆ ಮೂಡುಬಿದಿರೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ ಇದರ ಸಹಯೋಗದಲ್ಲಿ ವೇಣೂರು ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದ ಶುಭ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮೂಡುಬಿದಿರೆ ಮೆಸ್ಕಾಂ ಕಛೇರಿ ಬಳಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ನ್ಯಾಯವಾದಿಗಳು, ನೋಟರಿಯು ಆಗಿರುವ ಬಾಹುಬಲಿ ಪ್ರಸಾದ್ ಅವರು ಸ್ವಚ್ಛ ಮನಸ್ಸು ಸ್ವಚ್ಛ ಪರಿಸರ ಸ್ವಚ್ಛ ಮನಸ್ಸಿನ ಪ್ರತೀಕವಾಗಿದೆ. ಸ್ವಚ್ಛವಾಗಿರುವುದು ಭಾರತೀಯ ಸಂಸ್ಕöÈತಿ. ನಮ್ಮ ಪರಿಸರವನ್ನು ಸ್ವಚ್ಛವಾಗಿಡುವುದರಿಂದ ನಮ್ಮ ಸಂಸ್ಕöÈತಿಯನ್ನು ಗೌರವಿಸಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಮೂಡುಬಿದಿರೆ ಅಧ್ಯಕ್ಷರಾದ ಯುವರಾಜ ಜೈನ್ ಅವರು ಸ್ವಚ್ಛತೆಯ ಬಗ್ಗೆ ಮನೆ ಮನಗಳಲ್ಲಿ ಜಾಗೃತಿ ಮೂಡಿಸುವ ಸದಾಶಯದ ಸಂಕಲ್ಪದೊAದಿಗೆ ಮೂಡುಬಿದಿರೆಯಿಂದ ವೇಣೂರು ತನಕ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿದೆ. ಸ್ವಚ್ಛತೆ ಎನ್ನುವುದು ನಮ್ಮ ಜೀವನ ಪದ್ಧತಿ ಆಗಬೇಕು. ಮನೆಯ ಕಿರಿಯರು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ಲಾಸ್ಟಿಕ್ ಮುಕ್ತ ಮಾಡುವುದರೊಂದಿಗೆ ಭವಿಷ್ಯದಲ್ಲಿ ಭದ್ರ ಭಾರತವನ್ನು ಕಟ್ಟುವ ಕೆಲಸಗಳಲ್ಲಿ ಕೈಜೋಡಿಸಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಚ್ಛತೆ ಮಾಡುವ ಪ್ರತಿ ಮಗುವು ಒಬ್ಬ ಸೈನಿಕನಿದ್ದಂತೆ. ನಮ್ಮ ಸನಾತನತೆ ಹೇಳುವ ಸಂಸ್ಕöÈತಿಯ ಪ್ರತಿನಿಧಿಗಳಾಗೋಣ ಎಂದರು.
ಸಮಾರAಭಗಳಲ್ಲಿ ಸಹಯೋಗ ನೀಡಿದ ಜೈನ್ ಮಿಲನ್ ಮೂಡುಬಿದಿರೆ ಅಧ್ಯಕ್ಷರಾದ ದಿನೇಶ್ ಆನಡ್ಕ, ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆಯ ಅಧ್ಯಕ್ಷರಾದ ರೋನಿ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷರಾದ ಜೆಸ್ಸಿ ಮೆನೇಜಸ್, ಮೂಡುಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷರಾದ ಯಶೋಧರ ಬಂಗೇರ, ಉಪಾಧ್ಯಕ್ಷರಾದ ಪ್ರೇಮಶ್ರೀ, ವಕೀಲರಾದ ಶೇತಾ ಜೈನ್, ಎಕ್ಸಲೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಬಿ ಪಿ ಸಂಪತ್ ಕುಮಾರ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿ, ಉಪಸ್ಥಿತರಿದ್ದರು.
ಮೂಡುಬಿದಿರೆ ಮೆಸ್ಕಾ೦ ಬಳಿಯಿ೦ದ ಗ೦ಟಾಲ್ಕಟ್ಟೆ, ಹೊಸ೦ಗಡಿ, ಪೆರಿ೦ಜೆ, ಕರಿಮಣಿಯಲು, ವೇಣೂರು ಹೀಗೆ ಆರು ತ೦ಡಗಳಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವುದರೊ೦ದಿಗೆ ಅಲ್ಲಲ್ಲಿ ಸೂಚನಾ ಫಲಕಗಳು ಅಳವಡಿಸುವುದು, ನಾಲ್ಕು ಬಸ್ಸು ನಿಲ್ದಾಣಗಳಲ್ಲಿ ವರ್ಲಿ ಪೈ೦ಟಿ೦ಗ್ ಮು೦ತಾದ ಚಟುವಟಿಕೆಗಳ ಮೂಲಕ ಅಭಿಯಾನ ಸ೦ಪನ್ನಗೊ೦ಡಿತು.
ಡಾ ವಾದಿರಾಜ ಕಲ್ಲೂರಾಯ, ತೇಜಸ್ವಿ ಭಟ್ ನಿರೂಪಿಸಿ ವ೦ದಿಸಿದರು.




ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ






