Share this news

ರಾಜ್‌ಕೋಟ್: ಸೂರ್ಯಕುಮಾರ್ ಯಾದವ್ ಸ್ಫೋಟಕ ಶತಕ ಹಾಗೂ ಬೌಲರ್‌ಗಳ ದಿಟ್ಟ ಹೋರಾಟದ ಫಲವಾಗಿ ಭಾರತ ಅಂತಿಮ T20 ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 91ಮಣಿಸಿ ಸರಣಿಯನ್ನು 2-1 ರಲ್ಲಿ ಗೆದ್ದುಕೊಂಡಿದೆ.


ರಾಜ್ ಕೋಟ್ ಮೈದಾನದಲ್ಲಿ ಶನಿವಾರ ನಡೆದ  3ನೇ ಹಾಗೂ ಅಂತಿಮ T-20 ಪಂದ್ಯದಲ್ಲಿ ಶ್ರೀಲಂಕಾ 16.4 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟೀಂ ಇಂಡಿಯಾ 91 ರನ್ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಗೆದ್ದ ಟೀಂ‌ ಇಂಡಿಯಾ ಮೊದಲು‌ ಬ್ಯಾಟಿಂಗ್ ಆಯ್ದುಕೊಂಡಿತ್ತು.

ಆರಂಭಿಕ ಆಟಗಾರ ಇಶಾನ್ ಕಿಶನ್ ಕೇವಲ1 ರನ್ ಗಳಿಸಿ ಔಟಾದ ಬಳಿಕ ಜೊತೆಯಾದ ಶುಭ್ಮನ್ ಗಿಲ್(46) ಹಾಗೂ ರಾಹುಲ್ ತ್ರಿಪಾಠಿ(35) ಉತ್ತಮ ಜತೆಯಾಟದ ಬಳಿಕ ಬಂದ ಸ್ಪೋಟಕ ಬ್ಯಾಟರ್
ಸೂರ್ಯಕುಮಾರ್ ಯಾದವ್ ಅಜೇಯ ಭರ್ಜರಿ 112 ರನ್ ಶತಕದಿಂದ ಭಾರತ ಅಂತಿಮವಾಗಿ 228 ರನ್ ಸಿಡಿಸಿತ್ತು.

ಈ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ಶ್ರೀಲಂಕಾ ತಂಡ ವಿಫಲವಾಯಿತು. ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ಲಂಕಾ ತತ್ತರಿಸಿತು. ಪಥುಮ್ ನಿಸಂಕ 15 ರನ್ ಸಿಡಿಸಿ ಔಟಾದರು. ಇತ್ತ ಕುಸಾಲ್ ಮೆಂಡೀಸ್ 23 ರನ್ ಸಿಡಿಸಿ ಔಟಾದರು.ಧನಂಜಯ್ ಡಿಸಿಲ್ವ 22 ರನ್ ಕಾಣಿಕೆ ನೀಡಿದರು. ಚಾರಿತ್ ಅಸಲಂಕ 19 ರನ್ ಸಿಡಿಸಿ ನಿರ್ಗಮಿಸಿದರು. ಕಳೆದೆರಡು ಪಂದ್ಯದಲ್ಲಿ ಅಬ್ಬರಿಸಿದ ನಾಯ ದಸೂನ್ ಶನಕ ಈ ಪಂದ್ಯದಲ್ಲಿ ಅಬ್ಬರಿಸಿಲ್ಲ. ಇದು‌ ಶ್ರೀಲಂಕಾ ಸೋಲಿಗೆ ಪ್ರಮುಖ ಕಾರಣವಾಯಿತು.
ಅಂತಿಮವಾಗಿ ಶ್ರೀಲಂಕಾ 16.4 ಓವರ್‌ಗಳಲ್ಲಿ 137 ರನ್ ಗಳಿಸಷ್ಟೇ ಶಕ್ತವಾಯಿತು. ಈ ಮೂಲಕ ಭಾರತ 91 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಭಾರತ ತಂಡದ ಬೌಲರ್ ಗಳ ಪರವಾಗಿ ವೇಗಿ ಅರ್ಶದೀಪ್ ಸಿಂಗ್ 3 ವಿಕೆಟ್, ಹಾರ್ದಿಕ್ ಪಾಂಡ್ಯ,ಯಜುವೇಂದ್ರ ಚಹಲ್ ಹಾಗೂ ಉಮ್ರಾನ್ ಮಲಿಕ್ 2 ವಿಕೆಟ್ ಪಡೆದರು, ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ, ಅಕ್ಸರ್ ಪಟೇಲ್ 1 ವಿಕೆಟ್ ಪಡೆದರು

Leave a Reply

Your email address will not be published. Required fields are marked *