ಕಾರ್ಕಳ: ವಿಜಯನಗರ ಜಿ.ಪಂ ಸಿಇಓ ಐಎಎಸ್ ಅಧಿಕಾರಿ ಎಳ್ಳಾರೆ ಸದಾಶಿವ ಪ್ರಭು ಅವರ ತೀರ್ಥರೂಪರಾದ ವೈ.ವಿಠಲ ಪ್ರಭು(85) ಹೃದಯಾಘಾತದಿಂದ ಬುಧವಾರ ಎಳ್ಳಾರೆ ಬೆಂಬರಬೈಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ,ಪತ್ರ ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಕೃಷ್ಣಮೂರ್ತಿ ಪ್ರಭು,ಹಾಗೂ ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಗುರುವಾರ ಬೆಳಗ್ಗೆ10 ಗಂಟೆಗೆ ಎಳ್ಳಾರೆಯ ಬೆಂಬರಬೈಲಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.