ಮಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ 81 ನೇ ಜನ್ಮೋತ್ಸವದ ಪ್ರಯುಕ್ತ ಮೇ 27 ರಂದು ಮಂಗಳೂರಿನ ಪಿ. ವಿ. ಎಸ್.ಸರ್ಕಲ್ ನಲ್ಲಿ ಧರ್ಮಧ್ವಜದ ಪೂಜೆಯೊಂದಿಗೆ ಪ್ರಾರಂಭವಾದ ಶೋಭಾಯಾತ್ರೆಯು ಲಾಲ್ ಬಾಗ್ ವರೆಗೆ ಸಾಗಿ, ಸಮಾರೋಪ ಸಮಾರಂಭ ನಡೆಯಿತು.
ಸಮಾರೋಪ ಸಭೆಯಲ್ಲಿ ಸನಾತನ ಸಂಸ್ಥೆಯ ಸಾಧಕರಾದ ಲಕ್ಷ್ಮಿ ಪೈ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವ ನಾಯಕರಾದ ಗುರುಪ್ರಸಾದ್ ಗೌಡ ಹಾಗೂ ವಕೀಲ ಉದಯ್ ಕುಮಾರ್ ಬಿ ಕೆ ಮಾತನಾಡಿದರು.
ಮೆರವಣೆಗೆಯಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಪದಾಧಿಕಾರಿಗಳು, ಭಜನಾ ಮಂಡಳಿಯವರು ಕುಣಿತ ಭಜನೆಯೊಂದಿಗೆ, ಚಂಡೆ, ವಾದ್ಯ ಬಳಗದವರು, ವಿಶೇಷವಾಗಿ ರಣರಾಗಿಣೆ ಶಾಖೆಯ ಯುವತಿಯರು, ಕಿತ್ತೂರು ರಾಣಿ ಚೆನ್ನಮ್ಮ, ಓನಕೆ ಓಬವ್ವ, ಬಾಲ ಗಂಗಾಧರ ತಿಲಕ್ ಮುಂತಾದ ವೇಷದಲ್ಲಿ ಮಿಂಚಿದರು. ಅನೇಕ ಸಂಘಟನೆಗಳು, ಮಹಿಳಾ ಮಂಡಳಿಗಳು, ಇತರ ಮಹಿಳಾ ಸಂಘದ ಕಾರ್ಯಕರ್ತರು ಭಾಗಿಯಾಗಿದ್ದರು
ಶೋಭಯಾತ್ರೆಯ ಉದ್ದಕ್ಕೂ ಸಂಸ್ಥೆಯ ಸಾಧಕರು ಧರ್ಮಜಾಗೃತಿ, ಹಿಂದೂ ಏಕತೆ , ರಾಷ್ಟ್ರಪ್ರೇಮ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಸಮಾಜದಲ್ಲಿ ಜಾಗೃತಿ ಮೂಡಿಸಿದರು.