ಮಂಗಳೂರು : ಇತ್ತೀಚೆಗೆ ನಡೆದ ಮಂಗಳೂರು ತಾಲೂಕು ಗಂಜಿಮಠ ಮರಾಠಿ ಸಮಾಜ ಸೇವಾ ಸಂಘದ ಮಹಾಸಭೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಯೋಗ ಶಿಕ್ಷಕ ಶೇಖರ ಕಡ್ತಲ ಅವರು 2ನೇ ಬಾರಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ನಿವೃತ್ತ ಪ್ರಾದೇಶಿಕ ಪ್ರಬಂಧಕರಾದ ವಿ ಪಿ ನಾಯ್ಕ್ ನೆರವೇರಿಸಿದರು.

ರವಾಧ್ಯಕ್ಷರಾಗಿ ವಿ.ಪಿ ನಾಯ್ಕ್ ಮಂಗಳೂರು,ಗೌರವ ಸಲಹೆಗಾರರಾಗಿ ಪದ್ಮನಾಭ ಡಿ ನಾಯ್ಕ್ ಗಂಜಿಮಠ,ಉಪಾಧ್ಯಕ್ಷರಾಗಿ ಕೇಶವ ನಾಯ್ಕ್,ಗಂಜಿಮಠ,ರಾಜೀವಿ ನಾಯ್ಕ್ ಬ್ರಿಂಡೆಲ್,ಕಾರ್ಯದರ್ಶಿಯಾಗಿ ಅಶೋಕ ನಾಯ್ಕ್ ಮುಚ್ಚೂರು, ಜೊತೆ ಕಾರ್ಯದರ್ಶಿಯಾಗಿ ನಾರಾಯಣ ನಾಯ್ಕ್ ಗರಡಿ, ಕೋಶಾಧಿಕಾರಿಯಾಗಿ ಪುರಂದರ ನಾಯ್ಕ್ ಕೊರ್ಡೆಲ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತೇಶ್ ಕುಮಾರ್ ಬೋರುಗುಡ್ಡೆ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ಜಯರಾಮ ನಾಯ್ಕ್ ಮುತ್ತೂರು ಬಾಳಿಕೆ ಆಯ್ಕೆಯಾಗಿದ್ದಾರೆ.

ಸಂಘಟನಾ ಕಾರ್ಯದರ್ಶಿಗಳಾಗಿ ಮಹಾಬಲ ನಾಯ್ಕ್ ಮುಚ್ಚೂರು, ಸತೀಶ ನಾಯ್ಕ್ ಕೊಂದೋಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಂದರ ನಾಯ್ಕ್ ಕೊರ್ಡೆಲ್, ಗುಣಪಾಲ ಎನ್ ಕೊರ್ಡೆಲ್, ಸುಲತಾ ಸಂತೋಷ್ ಕುಕ್ಕಟ್ಟೆ, ರಾಜೇಶ ನಾಯ್ಕ್ ಕಿಲೆಂಜಾರು, ಭಾಸ್ಕರ್ ನಾಯ್ಕ್ ಬ್ರಿಂಡೆಲ್, ಗಂಗಯ್ಯ ನಾಯ್ಕ್ ಬ್ರಿಂಡೆಲ್, ಸಂತೋಷ್ ನಾಯ್ಕ್ ಕೊರ್ಡೇಲ್,ನಿಶಾಂತ್ ಬೊಳಿಯಾ, ಆನಂದ ನಾಯ್ಕ್ ಕುಂಚಿತ್ತಬೆಟ್ಟು, ನಯನಾಕ್ಷಿ ಕೊಂಪದವು, ಹರೀಶ್ ನಾಯ್ಕ್ ಕಿಲೆಂಜಾರು, ಸತೀಶ ನಾಯ್ಕ್ ಮಂಗೆಬೆಟ್ಟು,ಶಾಲಿನಿ ಶೇಖರ ಕಡ್ತಲ,ಶ್ರಾವ್ಯ ಕೊರ್ಡೆಲ್, ಸಂತೋಷ್ ನಾಯ್ಕ್ ಗರಡಿ ಆಯ್ಕೆಯಾಗಿರುತ್ತಾರೆ.

