ಉಡುಪಿ: ಉಡುಪಿಯ ಅಪರ ಜಿಲ್ಲಾಧಿಕಾರಿಯಾಗಿದ್ದ ವೀಣಾ ಬಿ ಎನ್ ಅವರನ್ನು ವರ್ಗಾವಣೆಗೊಳಿಸಿ ಅವರ ಜಾಗಕ್ಕೆ ಮಮತಾದೇವಿ ಜಿಎಸ್ ಅವರನ್ನು ನೇಮಕಗೊಳಿಸಲು ಸರ್ಕಾರ ಆದೇಶಿಸಿದೆ.
ವರ್ಗಾವಣೆಗೊಂಡ ವೀಣಾ ಅವರಿಗೆ ಸ್ಥಳ ನಿಗದಿಯಾಗಿಲ್ಲ. ಮಮತಾದೇವಿ ಅವರು ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯದ ಕುಲ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

