ಕಾರ್ಕಳ :ಮಂಗಲಪಾಂಡೆಯಿಂದ ಹಿಡಿದು ಎಲ್ಲ ನಮ್ಮ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಅವರ ಶ್ರಮದ ಹಿಂದಿರುವ ಮಹತ್ವವನ್ನು ಅರಿಯಬೇಕಾದ ಅವಶ್ಯಕತೆ ಈ ತಲೆಮಾರಿನ ವಿದ್ಯಾರ್ಥಿಗಳಿಗೆ ಇರಬೇಕು.ಸ್ವಾತಂತ್ರ್ಯಕ್ಕಾಗಿ ಅವರು ಕೊಟ್ಟ ಬಲಿದಾನ ದೊಡ್ಡದು.ಇಂದು ನಮ್ಮ ದೇಶ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ ಎ.ಕೋಟ್ಯಾನ್ ಹೇಳಿದರು.
ಅವರು ಕಾಲೇಜಿನಲ್ಲಿ ನಡೆದ 78ನೆಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಧ್ವಜಾರೋಹಣದ ಬಳಿಕ ಕಾಲೇಜಿನ ಎನ್.ಸಿ.ಸಿ ತಂಡದಿಂದ ಪಥಸಂಚಲನ ನಡೆಯಿತು. ಕಾಲೇಜಿನ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



























`
