ಅಜೆಕಾರು: ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುಜೆ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ಹಾಗೂ ಸಾಗಿಸುತ್ತಿದ್ದ ಮರಳನ್ನು ಲಾರಿ ಸಹಿತ ಪೊಲೀಸರು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ರೌಂಡ್ಸ್ ನಲ್ಲಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ಕುಕ್ಕುಜೆ ಗ್ರಾಮದ ಬೈಂತ್ಲ ಎಂಬಲ್ಲಿರುವ ನಿತ್ಯಾನಂದ ಇವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದ ಬಳಿ ದಾಳಿ ನಡೆಸಿದಾಗ ಸುಮಾರು 5 ಯುನಿಟ್ ಮರಳು ಅಕ್ರಮ ದಾಸ್ತಾನಿರಿಸಿದ್ದು, ಈ ಬಗ್ಗೆ ನಿತ್ಯಾನಂದ ಇವರಲ್ಲಿ ವಿಚಾರಿಸಿದಾಗ ಪದ್ಮನಾಭ ಮತ್ತು ಅಮಿತ್ ಎಂಬವರು ತನಗೆ ಮರಳು ಪೂರೈಕೆ ಮಾಡಿರುವುದಾಗಿ ತಿಳಿಸಿದ್ದಾರೆ.ಪೊಲೀಸರು ಮಹಜರು ನಡೆಸಿ ಸ್ಥಳದಲ್ಲಿದ್ದ ರೂ.10,000 ಮೌಲ್ಯದ 5 ಯುನಿಟ್ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದೆಡೆ ಕುಕ್ಕುಜೆ ಗ್ರಾಮದ ಸುವರ್ಣ ನದಿಯ ಸುಳಿಗುಂಡಿ ಎಂಬಲ್ಲಿ ಟಿಪ್ಪರ್ ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಲಾರಿ ಚಾಲಕ ತುಂಬಿದ್ದ ಮರಳನ್ನು ಅಲ್ಲಿಯೇ ಸುರಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪೊಲೀಸರು ಆತನನ್ನು ಲಾರಿ ಸಹಿತ ವಶಪಡಿಸಿಕೊಂಡಿದ್ದಾರೆ. ಲಾರಿ ಮಾಲಕ ಹರೀಶ್ ಸಿರಿಬೈಲು ಅವರ ಸೂಚನೆಯ ಮೇರೆಗೆ ಮರಳನ್ನು ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಆತ ಹೇಳಿಕೊಂಡಿದ್ದು ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
K