ಬ್ರಹ್ಮಾವರ : ಬ್ರಹ್ಮಾವರ – ಬಾರ್ಕೂರು ರಸ್ತೆಯ ಹಂದಾಡಿ ಗ್ರಾಮದ ನಿವಾಸಿಯಾದ ಪ್ರಕಾಶ್ ರವರ ಪುತ್ರನಾದ ಆರ್ಯ ನಿನ್ನೆಯಿಂದ ನಾಪತ್ತೆಯಾಗಿದ್ದಾನೆ.
ಬಾಲಕ ಆರ್ಯನಿಗೆ 13 ವರ್ಷ ವಯಸ್ಸಾಗಿದ್ದು ನಿನ್ನೆ ಆಕಾಶ್ ಇನ್ಸ್ಟಿಟ್ಯೂಟ್ ಗೆ ತೆರಳಿದವನು ಮರಳಿ ಮನೆಗೂ ಬಾರದೇ ಸಂಭಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುವುದಾಗಿ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತನನ್ನು ಕಂಡವರು ಉಡುಪಿ ನಗರ ಠಾಣೆ ಫೋನ್ ಸಂಖ್ಯೆ 0820-2520444 ಸಂಪರ್ಕಿಸಲು ಕೋರಲಾಗಿದೆ.




















