ಕಾರ್ಕಳ: ಭುವನೇಂದ್ರ ಕಾಲೇಜಿನಲ್ಲಿ “ಕನ್ನಡ ಸಿನಿಮಾ ಮತ್ತು ಸಾಹಿತ್ಯ” ವಿಶೇಷ ಉಪನ್ಯಾಸ
ಕಾರ್ಕಳ: ಸಿನಿಮಾ ಮಾಧ್ಯಮ ಸಮೂಹ ಸಂವಹನ ಮಾಧ್ಯಮಗಳಲ್ಲಿ ಅತ್ಯಂತ ಶಕ್ತಿಶಾಲಿಯಾದುದು. ಒಂದು ಕಾದಂಬರಿ, ಕಥೆ ನಿರ್ದೇಶಕನ ಕೈಚಳಕದಲ್ಲಿ ಮೂರುಗಂಟೆಯಲ್ಲಿ ಬೆಳ್ಳಿಪರದೆಯಲ್ಲಿ ಅನಾವರಣಗೊಳ್ಳುತ್ತದೆ ಮಾತ್ರವಲ್ಲ ಸಾಹಿತ್ಯಕೃತಿಯೊಂದರ ಜನಪ್ರಿಯತೆ ಹೆಚ್ಚಳವಾಗುವುದಕ್ಕೂ ಕಾರಣವಾಗುತ್ತದೆ. ಆದರೆ ಸಮಾಜದಲ್ಲಿ ಸಿನಿಮಾ ಸಾಹಿತಿಗಳನ್ನು ಸಾಹಿತ್ಯದ ಮುಖ್ಯ ಪರಿಧಿಯಲ್ಲಿ ಕಾಣದಿರುವುದು ವಿಷಾದನೀಯ…
