Share this news

ಕಾರ್ಕಳ ಆ.27: ಅಮಾಯಕ ಹಿಂದೂ ಯುವತಿಗೆ ಕಾರಿನಲ್ಲಿ ಕರೆದೊಯ್ದು ಆಕೆಗೆ ಬಿಯರಿನಲ್ಲಿ ಡ್ರಗ್ಸ್ ಬೆರೆಸಿ ಅತ್ಯಾಚಾರ ಎಸಗಿ ಪೈಶಾಚಿಕ ಕೃತ್ಯ ಎಸಗಿರುವುದು ಅತ್ಯಂತ ಖಂಡನೀಯ. ಆದರೆ ಈ ಘಟನೆಯ ಕುರಿತು ಅಥವಾ ಆರೋಪಿಯ ಕುರಿತಾಗಿ ತುಟಿ ಬಿಚ್ಚದ ಕೆಲ ಕಾಂಗ್ರೆಸ್ ಪುಡಾರಿಗಳು ಈ ಪ್ರಕರಣದಲ್ಲಿ ಅತ್ಯಾಚಾರ ಆರೋಪಿಗೆ ಡ್ರಗ್ಸ್ ಪೂರೈಕೆ ಮಾಡಿರುವ ಆರೋಪದಲ್ಲಿ ಮೂರನೇ ಆರೋಪಿ ಅಭಯ್ ಎಂಬವನ ಬಂಧನವಾಗುತ್ತಿದ್ದAತೆಯೇ ಎಚ್ಚರಗೊಂಡು ಅರಚುತ್ತಿದ್ದಾರೆ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಕಿಡಿಕಾರಿದ್ದಾರೆ.
ಅತ್ಯಾಚಾರದ ಆರೋಪಿ ಅಲ್ತಾಫ್ ವಿರುದ್ಧ ಈಗಾಗಲೇ ಡ್ರಗ್ಸ್ ಮಾರಾಟ, ಅಕ್ರಮ ಮರಳುಗಾರಿಕೆ ಹಾಗೂ ಅನೈತಿಕ ವ್ಯವಹಾರದ ಕುರಿತು ಆರೋಪಗಳಿವೆ,ಜತೆ ಹಲವು ಕ್ರಿಮಿನಲ್ ಪ್ರಕರಣಗಳಿವೆ ಎಂದು ಹೇಳಲಾಗುತ್ತಿದ್ದು, ಅಂತಹ ವ್ಯಕ್ತಿಯ ಪರವಾಗಿ ಕಾಂಗ್ರೆಸ್ ಸಮರ್ಥನೆ ನಿಂತಿರುವುದು ನಾಚಿಕೆಗೇಡು, ಮೂರನೇ ಆರೋಪಿ ಅಭಯ್ ಬಂಧನ ಸ್ವಾಗತಾರ್ಹ ಆತನಿಗೆ ಕಠಿಣ ಶಿಕ್ಷೆಯಾಗಬೇಕು ಈ ನಿಟ್ಟಿನಲ್ಲಿ ಪೊಲೀಸರ ಕ್ರಮ ಶ್ಲಾಘನೀಯ ಎಂದರು.
ಯುವತಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದ ಅಲ್ತಾಫ್ ಬಂಧನವಾದಾಗ ಈ ಪ್ರಕರಣದ ಬಗ್ಗೆ ಏನನ್ನೂ ಮಾತನಾಡದ ಕಾಂಗ್ರೆಸ್, ಇದೀಗ ಅಲ್ತಾಫ್ ನಿಗೆ ಮಾದಕ ದ್ರವ್ಯ ನೀಡಿದ ಆರೋಪಿ ಅಭಯ್ ಬಂಧನವಾದಾಗ ಆತ ಹಿಂದೂ, ಶಾಸಕರಾದ ಸುನಿಲ್ ಕುಮಾರ್ ಚೇಲಾ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲು ಶುರು ಮಾಡಿದ್ದು ಕಾಂಗ್ರೆಸ್ಸಿಗರ ಮಾನಸಿಕ ವಿಕಾರತೆ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಸಾಬೀತಾಗಿದೆ.
ಇಡೀ ಸಮಾಜವೇ ತಲೆತಗ್ಗಿಸುವ ಈ ಹೀನ ಕೃತ್ಯದಲ್ಲಿ ಯಾವ ಧರ್ಮದವರೇ ಭಾಗಿಯಾಗಿದ್ದರೂ ಬಿಜೆಪಿ ಅದನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತದೆ.ಆದರೆ ಕಾಂಗ್ರೆಸ್ ಪಕ್ಷದ ನಾಯಕರು ನೊಂದ ಯುವತಿಯ ಕುಟುಂಬಕ್ಕೆ ಕನಿಷ್ಟ ಸಾಂತ್ವಾನ ಹೇಳುವ ಕೆಲಸವನ್ನೂ ಮಾಡದೇ, ಅಭಯ್ ವಿಚಾರವನ್ನೇ ಗುರಾಣಿಯಂತೆ ಬಳಸಿಕೊಂಡು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದೆ, ಒಂದು ರಾಷ್ಟಿçÃಯ ಪಕ್ಷವಾದ ಕಾಂಗ್ರೆಸ್ ಸಂತ್ರಸ್ತ ಯುವತಿಯ ಕುಟುಂಬದ ಪರವಾಗಿ ನಿಲ್ಲದೇ ಇಷ್ಟು ಕೀಳುಮಟ್ಟಕ್ಕೆ ತಲುಪಿರುವುದು ನಿಜಕ್ಕೂ ಖೇದಕರ ಎಂದು ರವೀಂದ್ರ ಮೊಯ್ಲಿ ಹೇಳಿದ್ದಾರೆ

                        

                          

                        

                          

 

`

Leave a Reply

Your email address will not be published. Required fields are marked *