ಕಾರ್ಕಳ; “ನಶಾ ಮುಕ್ತ ಭಾರತ” ಅಭಿಯಾನದ ಅಂಗವಾಗಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಕಳ್ಳ ಸಾಗಣೆ ವಿರುದ್ಧದ ಅಂತರಾಷ್ಟ್ರೀಯ ದಿನವನ್ನು ಆಚರಿಸಲಾಯಿತು.
ಇದರ ಪ್ರತಿಜ್ಞಾವಿಧಿಯನ್ನು ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ಶಂಕರ್ ಕುಡ್ವ ಇವರು ನೆರವೇರಿಸಿದರು. ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ.ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ. ಕೊಟ್ಯಾನ್ ಹಾಗೂ ಎನ್.ಸಿ.ಸಿ.ಅಧಿಕಾರಿ ಕ್ಯಾ .ಶ್ರೀಮೂರ್ತಿ ಉಪಸ್ಥಿತರಿದ್ದರು