ಕಾರ್ಕಳ: ಮಾಜಿ ಶಾಸಕ ಗೋಪಾಲ ಭಂಡಾರಿಯವರನ್ನು ಬದುಕಿದ್ದಾಗಲೇ ಸಾಕಷ್ಟು ಅವಮಾನ ಮಾಡಿದ್ದ ಕಾಂಗ್ರೆಸ್ ಅವರು ನಿಧನರಾದ ಬಳಿಕವೂ ಮತ್ತೆ ಅಪಮಾನ ಮಾಡಿದೆ. ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಕಳದಲ್ಲಿ ನಡೆದ ಕುಟುಂಬೋತ್ಸವ ಸಮಾವೇಶದ ವೇದಿಕೆಯಲ್ಲಿ ಹಾಗೂ ಕಾರ್ಯಕ್ರಮ ಪೂರ್ವದಲ್ಲಿ ಪ್ರಚಾರ ಫಲಕಗಳಲ್ಲಿ ಗೋಪಾಲ್ ಭಂಡಾರಿಯವರ ಫೋಟೋ ಹಾಕದೇ ಭಂಡಾರಿಯವರಿಗೆ ಅವಮಾನ ಮಾಡಿದೆ ಎಂದು ಕಾರ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ಆರೋಪಿಸಿದ್ದಾರೆ.
ಒಂದು ಸಂದರ್ಭದಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ ಗೋಪಾಲ ಭಂಡಾರಿ ಅವರಿಗೆ ಅಪಮಾನ ಮಾಡಿದ ಮುನಿಯಾಲು ಉದಯ ಶೆಟ್ಟಿ ಮತ್ತು ಅವರ ಬಣದ ಕಾರ್ಯಕರ್ತರು ಮತ್ತೆ ಅವರನ್ನು ಗೌರವಿಸುವ ನಾಟಕವಾಡಿದ್ದಾರೆ. ಇಂತಹ ನಡವಳಿಕೆ ಕಾರ್ಕಳ ಕಾಂಗ್ರೆಸ್ ನಾಯಕರ ಮನೋ ಸ್ಥಿತಿಯನ್ನುತೋರಿಸುತ್ತಿದೆ.ಗೋಪಾಲ ಭಂಡಾರಿ ಯವರು ತನ್ನ ಕಾಲಾವಧಿಯಲ್ಲಿ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಪಕ್ಷ ಕಟ್ಟಿದ್ದಾರೆ ಆದರೆ ಈಗಿನ ನಾಯಕರುಗಳು ತಮ್ಮ ತಮ್ಮ ಹಿಂಬಾಲಕರಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಏನೇ ಇರಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಿಂದುಳಿದ ವರ್ಗದ ನಾಯಕನಿಗೆ ಕಾಂಗ್ರೆಸ್ ಅವಮಾನ ಮಾಡಿರುವುದು ಬೇಸರದ ಸಂಗತಿ. ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿಯವರು ಡಿಕೆ ಶಿವಕುಮಾರ್ ರವರನ್ನು ಮುಂದಿನ ಮುಖ್ಯಮಂತ್ರಿ ಆಗುತ್ತೀರಿ ಎಂದಾಗ ವೇದಿಕೆಯಲ್ಲಿದ್ದ ಕಾರ್ಕಳ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮಾನ್ಯ ಉದಯ್ ಕುಮಾರ್ ಶೆಟ್ಟಿಯವರು ನಗುತ್ತಾ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದು ನೋಡಿದರೆ ಇವರು ಸಿದ್ದರಾಮಯ್ಯನವರ ಬಣದಿಂದ ಈಗ ಡಿಕೆಶಿ ಬಣಕ್ಕೆ ವಾಲಿದರೆ ಎಂಬ ಅನುಮಾನ ಮೂಡುತ್ತಿದೆ. ಡಿ.ಕೆ.ಶಿ ಯವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವುದಕ್ಕೆ ಕಾರ್ಕಳದಲ್ಲಿ ಇಂತಹ ಸಮಾವೇಶ ಹಮ್ಮಿಕೊಂಡರೆ ಎಂಬ ಸಂದೇಹವೂ ಮೂಡಿದೆ ಎಂದು ಸುರೇಶ್ ಶೆಟ್ಟಿ ವ್ಯಂಗ್ಯವಾಡಿದ್ದಾರೆ.

K