
ಕಾರ್ಕಳ: OSAAT ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರ 119 ನೇ ಪ್ರಾಜೆಕ್ಟನ್ನು ದಾನಿಗಳಾದ Rakuten India Enterprise pvt,Ltd Bangalore ಇವರ ನೆರವಿನೊಂದಿಗೆ ಕಾರ್ಕಳ ತಾಲೂಕಿನ ಹೊಸ್ಮಾರು ಕರ್ನಾಟಕ ಪಬ್ಲಿಕ್ ಸ್ಕೂಲ್ ( ಪ್ರಾಥಮಿಕ ವಿಭಾಗ )ನ 4 ತರಗತಿ ಕೋಣೆಗಳನ್ನು ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಜಗದೀಶ್ ಅಂಚನ್, ಈದು ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಪೂಜಾರಿ, ಕೆ,ಪಿ ಎಸ್ ಉಪ ಪ್ರಾಂಶುಪಾಲ ದಿವಾಕರ ಹೆಗ್ಡೆ, ಹಿರಿಯರಾದ ಪುರುಷೋತ್ತಮ ರಾವ್, ಪ್ರಾಥಮಿಕ ವಿಭಾಗದ ವಿಜಯ ಕುಮಾರ್ ಪಿ, ಭೌತಿಕ ಸೌಲಭ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್, ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಪಂಚಾಯತ್ ಸದಸ್ಯರು, ಪೋಷಕರು, ಹಾಗೂ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.





