Share this news

ಕಾರ್ಕಳ:ಬುಧವಾರ ಸಂಜೆಯಿಂದ ಸುರಿದ ಭಾರೀ ಮಳೆಗೆ ಕಾರ್ಕಳ ತಾಲೂಕಿನ ಹಲವೆಡೆ ಭಾರೀ ನೆರೆ ಪರಿಸ್ಥಿತಿ ಉಂಟಾಗಿ,ದುರ್ಗ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಇದಲ್ಲದೇ ಹೊಸ್ಮಾರು ಸಮೀಪದ ನೆಲ್ಲಿಕಾರಿನ ದೆಂಜಾರು ಎಂಬಲ್ಲಿ ದನದ ಕೊಟ್ಟಿಗೆಗೆ ನೀರು ನುಗ್ಗಿದ ಪರಿಣಾಮ ನೀರು ತುಂಬಿ ಮುಳುಗುತ್ತಿದ್ದ ದನಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಜೀವದ ಹಂಗು ತೊರೆದು ಹಟ್ಟಿಯಲ್ಲಿದ್ದ 55 ದನಗಳನ್ನು ರಕ್ಷಣೆ ಮಾಡಿದ್ದಾರೆ.ಆದರೆ 5 ದನಗಳನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗದೇ ನೀರಿನಲ್ಲಿ ಕೊಚ್ಚಿಹೋಗಿವೆ.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಚಂದ್ರಶೇಖರ, ಸಿಬ್ಬಂದಿಯವರಾದ ರೂಪೇಶ್, ಹರಿಪ್ರಸಾದ್ ಶೆಟ್ಟಿಗಾರ್, ಮುಝಮಿಲ್ , ಭೀಮಪ್ಪ ನರಹಟ್ಟಿ , ರವಿಚಂದ್ರ ,ಬಸವರಾಜ ಪಾಟೀಲ ಭಾಗಿಯಾಗಿದ್ದರು.

                        

                          

                        

                          

 

`

Leave a Reply

Your email address will not be published. Required fields are marked *