ಕಾರ್ಕಳ : ತೋಟಗಾರಿಕೆ ಇಲಾಖೆ ಕಾರ್ಕಳ, 3F ಆಯಿಲ್ ಪಾಮ್ ಪ್ರೈವೇಟ್ ಲಿಮಿಟೆಡ್ ಹಾಗೂ ಭಾರತಿ ಎಣ್ಣೆ ತಾಳೆ ಬೆಳಗಾರರ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಳೆ ಬೆಳೆ ನಾಟಿ ಮೆಗಾ ಡ್ರೈವ್ ಹಾಗೂ ತರಬೇತಿ ಕಾರ್ಯಕ್ರಮವು ತಾಲೂಕಿನ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜರುಗಿತು.
ಭಾರತಿ ಎಣ್ಣೆ ತಾಳೆ ಬೆಳೆಗಾರರ ಸಹಕಾರಿ ಸಂಘ ಕಾರ್ಕಳದ ಅಧ್ಯಕ್ಷರಾದ ದಯಾನಂದ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ರೈತರು ಬಹುಬೆಳೆ ಪದ್ಧತಿಯನ್ನು ಅನುಸರಿಸದಲ್ಲಿ ಮಾತ್ರ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ವಾತಾವರಣಕ್ಕೆ ತಾಳೆ ಬೆಳೆ ಒಂದು ಸೂಕ್ತವಾದ ಬೆಳೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆ ವಹಿಸಿದ್ದರು.
ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಕ್ಷ್ಮಿ ಪೂಜಾರಿ, 3F ಕಂಪೆನಿಯ ಕೃಷ್ಣೇಗೌಡ ಹಾಗೂ ಪ್ರಗತಿ ಪರ ತಾಳೆ ಕೃಷಿಕರಾದ ದೇವಿದಾಸ ಶೆಟ್ಟಿ ಹಾಜರಿದ್ದರು.
ಈ ಸಾಲಿನಲ್ಲಿ ತಾಳೆ ಬೆಳೆ ನಾಟಿ ಕುರಿತಂತೆ ಮೆಗಾ ಡ್ರೈವ್ ಗೆ ಶ್ರೀ ವಿನೋದರಾಜ್ ಎಳ್ಳಾರೆ ರವರ ತೋಟದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀನಿವಾಸ್ ಬಿ.ವಿ ನಿರ್ವಹಿಸಿದರು.
`