ಕಾರ್ಕಳ: ಅನಾರೋಗ್ಯಕ್ಕೆ ತುತ್ತಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಆ.16 ರಂದು ನಡೆದಿದೆ.
ಕಸಬಾ ಗ್ರಾಮದ ಪೆರ್ವಾಜೆ ಪತ್ತೊಂಜಿಕಟ್ಟೆ ನಿವಾಸಿ ಸುನಂದ (50) ಮೃತಪಟ್ಟವರು.
ಸುನಂದ ಅವರು ಆ. 15 ರಂದು ಕಾರ್ಕಳ ಪ್ರತಿಭಾ ನರ್ಸಿಂಗ್ ಹೋಮ್ ನಲ್ಲಿ ಜ್ಚರಕ್ಕೆ ಔಷಧಿ ತಂದಿದ್ದರು , ಆದರೆ ಆ.16 ರಂದು ಸುನಂದರವರು ಸುಸ್ತು, ಕಾಲು ನೋಯುತ್ತಿದೆ ಎಂದಾಗ
ಅವರನ್ನು ಕಾರ್ಕಳ ಪ್ರತಿಭಾ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಸುನಂದ ಮೃತಪಟ್ಟಿದ್ದರು.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.