Share this news

ಕಾರ್ಕಳ : ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ಬಳಿ ಬೈಕ್ – ರಿಕ್ಷಾ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಿಕ್ಷಾ ಚಾಲಕ ರವಿ ಮೃತಪಟ್ಟ ದುರ್ದೈವಿ.

ಗುರುವಾರ (ಆ.14) ಬೆಳಿಗ್ಗೆ ಮುಡಾರಿನ ಧೀರಜ್ ಅವರು ಜಿತೇಶ್‌ ರೊಂದಿಗೆ ತಮ್ಮ ಬೈಕಿನಲ್ಲಿ ಬಜಗೋಳಿ ಕಡೆಯಿಂದ ನಿಟ್ಟೆ ಕಡೆಗೆ ಹೋಗುತ್ತಿದ್ದಾಗ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್‌ ಬಳಿ ಕಾರ್ಕಳ ಪೇಟೆ ಕಡೆಯಿಂದ ಮೂಡಬಿದ್ರೆ ಕಡೆಗೆ ಹೋಗುತ್ತಿದ್ದ ರವಿ ಎಂಬವರ ಅಟೋರಿಕ್ಷಾ ಅತೀವೇಗವಾಗಿ ಬಂದು ಬೈಕಿನ ಹಿಂಬದಿಗೆ ಡಿಕ್ಕಿಯಾಗಿದೆ.

ಅಪಘಾತದ ರಭಸಕ್ಕೆ ಅಟೋರಿಕ್ಷಾ ಪಲ್ಟಿಯಾಗಿ ಚಾಲಕ ರವಿ ರಿಕ್ಷಾದ ಅಡಿಗೆ ಸಿಕ್ಕಿಕೊಂಡಿದ್ದರು. ಅವರನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅದಾಗಲೇ ಮೃತಪಟ್ಟಿದ್ದರು.

ಬೈಕ ಸವಾರ ಧೀರಜ್‌, ಸಹ ಸವಾರ ಜಿತೇಶ್‌ ಹಾಗೂ ರಿಕ್ಷಾ ದಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *