ಕಾರ್ಕಳ: ಕಾರ್ಕಳದ ಮರದ ಮಿಲ್ ಒಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಕಳವುಗೈದಿರುವ ಘಟನೆ ಅ.25 ರ ಬೆಳಿಗ್ಗೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಾರಾವಿಯ ಪ್ರಕಾಶ್ ಎಂಬವರು 15.10.2023 ರಿಂದ 14.10.2028 ರ ವರೆಗೆ 5 ವರ್ಷದ ಅವಧಿಗೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಗಾಂಧಿ ಮೈದಾನದ ಬಳಿ ಇರುವ ನಿರ್ಮಲಾ ಸ್ವಾ-ಮಿಲ್ಲ್ ( ಮರದ ಮಿಲ್ಲನ್ನು) ಲೀಸ್ಗೆ ಪಡೆದುಕೊಂಡಿದ್ದರು. ಹೀಗೆ ಲೀಸ್ಗೆ ಪಡೆದ ಮಿಲ್ಲಿನಲ್ಲಿ ಮರದ ಕೆಲಸ ಮಾಡುತ್ತಿರುವಾಗ ಆರೋಪಿ ಕಾರ್ಕಳ ನಿರ್ಮಲ ಕಂಪೌAಡ್ ನ ಕೆ. ಸಂತೋಷ ಎಂಬಾತ ಅಕ್ಟೋಬರ್.5 ರಂದು ವರ್ಕಶಾಪ್ನ್ ಗೇಟ್ಗೆ ಬೀಗ ಹಾಕಿದ್ದಾನೆ.
ಆ ಬಳಿಕವೂ ಪ್ರಕಾಶ್ ರವರಿಗೆ ಪದೇ ಪದೇ ತೊಂದರೆ ಕೊಡುತ್ತಿದ್ದ ಸಂತೋಷ್ ಅ.25. ಬೆಳಿಗ್ಗೆ 11:51ರ ವೇಳೆಗೆ ಇನ್ನೋರ್ವನೊಂದಿಗೆ ಮರದ ಸ್ವಾ-ಮಿಲ್ಗೆ ಪ್ರವೇಶಿಸಿ ಮಿಲ್ಗೆ ಅಳವಡಿಸಿದ ಸಿಸಿ ಕ್ಯಾಮರಾ ಹಾಗೂ ಇತರ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾನೆ ಎಂದು ಪ್ರಕಾಶ್ ನಗರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.