Share this news

ಕಾರ್ಕಳ: ಸೆಂಟ್ರಿಂಗ್‌ ಕೆಲಸ ಆಡುತ್ತಿದ್ದ ವೇಳೆ ಕೆಲಸಗಾರರ ಜೊತೆ ಜಗಳ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಮಾರಣಾಂತಿಕ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಾರ್ಕಳ ತಾಲೂಕಿನ ಇರ್ವತ್ತೂರಿನಲ್ಲಿ ಡಿ.30 ರಂದು ನಡೆದಿದೆ.

ಪರಿಶಿಷ್ಟ ಜಾತಿಗೆ ಸೇರಿದ ವಿಠಲ ಎಂಬವರು ರೋಹಿತ್ ಅವರ ಜೊತೆಗೆ ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿದ್ದು, ಡಿ.30 ರಂದು ಸುದರ್ಶನ್, ಜಯ ಮತ್ತು ರೋಹಿತ್ ರೊಂದಿಗೆ ಇರ್ವತ್ತೂರು ಗ್ರಾಮ ಪಂಚಾಯತ್ ಕಟ್ಟಡದ ಪಕ್ಕದಲ್ಲಿರುವ ಕಟ್ಟಡದ ಕಾಂಕ್ರಿಟ್ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಭರತ್ ಮತ್ತು ರೋಹಿತ್ ಮಧ್ಯೆ ಜಗಳ ನಡೆದಿದ್ದು, ಜಗಳ ಬಿಡಿಸಲು ಹೋಗಿದ್ದ ವಿಠಲ ಅವರ ಮೇಲೆ ಭರತ್ ಹಲ್ಲೆಗೆ ಯತ್ನಿಸಿದ್ದರು.

ಆದರೆ ಸಂಜೆಯ ವೇಳೆಗೆ ಮತ್ತೆ ಭರತ್ ಮತ್ತು ಭವಿಷತ್ ಎಂಬವರು ಮತ್ತೆ 10 ಜನರೊಂದಿಗೆ ಬಂದು ಏಕಾಏಕಿ ರಾಡ್ ಹಾಗೂ ಕಟ್ಟಿಗೆಯಿಂದ ಜಯ ಮತ್ತು ಸುದರ್ಶನ್ ರವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದು, ಹಲ್ಲೆಗೊಳಗಾದವರು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವಿಠಲ ಅವರು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

 

 

Leave a Reply

Your email address will not be published. Required fields are marked *