ಕಾರ್ಕಳ: ಕಾರ್ಕಳದ ನಗರದ ರಸ್ತೆ ಬದಿಯ ಚರಂಡಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಆಹಾರದ ಪೊಟ್ಟಣಗಳು ಹಾಗೂ ಇತರ ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿದ್ದು ಇದರಿಂದ ನೀರಿನ ಹರಿವಿಗೆ ತಡೆಯಾಗುತ್ತಿದ್ದು ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳೀಯರ ಆಕ್ರೋಶಕ್ಕೆ ಮಣಿದ ಕಾರ್ಕಳ ಪುರಸಭೆ ಕೂಡಲೇ ತ್ಯಾಜ್ಯವನ್ನು ಸ್ವಚ್ಚಗೊಳಿಸಿದೆ.
ಸ್ವಚ್ಛ ಕಾರ್ಕಳ ಬ್ರಿಗೇಡ್ ಮತ್ತು ಸ್ಥಳೀಯರು ಸೇರಿ `ಸ್ವಚ್ಛ ಮಾರ್ಗಂ’ ಅಭಿಯಾನದಡಿಯಲ್ಲಿ ಹಲವು ಬಾರಿ ಚರಂಡಿ ಶುದ್ಧೀಕರಣ ಕೈಗೊಂಡರೂ,ಪುರಸಭೆ ಯಾವುದೇ ದಂಡ ಅಥವಾ ಕಾನೂನು ಕ್ರಮಗಳನ್ನು ಕೈಗೊಳ್ಳದ ಹಿನ್ನಲೆಯಲ್ಲಿ ಕಿಡಿಗೇಡಿಗಳು ಯಾವುದೇ ಭಯವಿಲ್ಲದೆ ತ್ಯಾಜ್ಯ ವಸ್ತುಗಳನ್ನು ಎಸೆದು ಹೋಗುತ್ತಿದ್ದಾರೆ.ಕಳೆದ ಕೆಲ ತಿಂಗಳಿAದಲೇ ನಿತ್ಯ ಕಸವನ್ನು ಚರಂಡಿಗಳೊಳಗೆ ಎಸೆಯಲಾಗುತ್ತಿದೆ. ಇದರ ಪರಿಣಾಮವಾಗಿ ನೀರು ಹರಿಯುವ ಚರಂಡಿ ಮುಚ್ಚಿಹೋಗಿದ್ದು, ಮಳೆಗಾಲದಲ್ಲಿ ಚರಂಡಿ ಬ್ಲಾಕ್ ಆಗಿ ರಸ್ತೆಯಲ್ಲೇ ನೀರು ಹರಿಯುವ ಸಾಧ್ಯತೆಯಿತ್ತು.ಇದೀಗ ಚರಂಡಿಯ ಕಸ ತೆಗೆದ ಪರಿಣಾಮ ಮಳೆ ನೀರು ಹರಿಯಲು ಅನುಕೂಲವಾಗಿದೆ. ಸ್ಥಳೀಯರು ಪುರಸಭೆಯ ಕೆಲಸವನ್ನು ಶ್ಲಾಘಿಸಿದ್ದಾರೆ