Share this news

ಕಾರ್ಕಳ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೇ.21 ರಂದು ಕಾರ್ಕಳ ನಗರ ಠಾಣೆಗೆ ಬಂದ ಮಾಹಿತಿಯಂತೆ ಪರಿಶೀಲನೆ ನಡೆಸಿದಾಗ ಕಸಬಾ ಗ್ರಾಮದ ಸರ್ವಜ್ಞ ಸರ್ಕಲ್ ಬಳಿ ಟಿಪ್ಪರ್ ಲಾರಿಯಲ್ಲಿ ಚಾಲಕ ಮಂಜುನಾಥ ಮಾಲೀಕ ವಿರಾಜ್ ಹಾಗೂ ಗುರುಪುರದ ಶ್ರೀಕರ ಎಂಬವರು ಸೇರಿಕೊಂಡು ಮಂಗಳೂರಿನ ಗುರುಪುರ ಸರಕಾರಿ ಹೊಳೆಯಿಂದ ಅಕ್ರಮವಾಗಿ ಕಳವು ಮಾಡಿದ 2 ಯುನಿಟ್ ಮರಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಪೊಲೀಸರು ಮರಳು ಸಹಿತ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

 

 

 

 

Leave a Reply

Your email address will not be published. Required fields are marked *