ಕಾರ್ಕಳ : ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆಯಲ್ಲಿ ಅಗ್ನಿವೀರ್ ಆಗಿ ಸೇನೆಯಲ್ಲಿ ನಿಯುಕ್ತಿಗೊಂಡ ಪಳ್ಳಿಯ ದುರ್ಗಾ ಪ್ರಸಾದ್ ಕುಲಾಲ್ ರನ್ನು ಅವರ ನಿವಾಸದಲ್ಲಿ ಕಾರ್ಕಳ ಕುಲಾಲ ಸಂಘ, ಯುವ ವೇದಿಕೆ, ಕುಲಾಲ ಮಹಿಳಾ ವೇದಿಕೆ ಆಶ್ರಯದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕುಲಾಲ ಸಂಘದ ಅಧ್ಯಕ್ಷರಾದ ಭೋಜ ಕುಲಾಲ್, ಹೆಚ್ ಡಿ ಕುಲಾಲ್ ಹಿರ್ಗಾನ, ಮಾಧ್ಯಮ ಬಿಂಬ ಹಾಗೂ ಸ್ವಯಂ ಟೈಮ್ಸ್ ಸಂಪಾದಕರಾದ ವಸಂತ್ ಕುಮಾರ್, ಯುವ ವೇದಿಕೆ ಜಿಲ್ಲಾಧ್ಯಕ್ಷ ದಿವಾಕರ್ ಎಂ ಬಂಗೇರ, ಹರೀಶ್ಚಂದ್ರ ಹಿರ್ಗಾನ, ಕುಂಭಶ್ರೀ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಮೂಲ್ಯ, ಹೃದಯ ಕುಲಾಲ್ ಹಿರ್ಗಾನ,ಸಂಗೀತ ಕುಲಾಲ್ ಬೋಳ, ವಸಂತ್ ಕುಲಾಲ್ ಯರ್ಲಪಾಡಿ, ಜ್ಯೋತಿ ಕುಲಾಲ್ ನಿಟ್ಟೆ, ಸುರೇಶ್ ಕುಲಾಲ್ ರಂಗನಪಲ್ಕೆ,ಸದಾನಂದ ನೀರೆ,ಶಾಲಿನಿ ಕುಲಾಲ್ ಇರ್ವತ್ತೂರು,ಸುರೇಖಾ ಕುಲಾಲ್,ಲಕ್ಷ್ಮಿ ಕೆ ಮೂಲ್ಯ,ರಾಘವೇಂದ್ರ ಸಾಣೂರು, ಸಂತೋಷ ಕುಲಾಲ್ , ಸುಗಂಧಿ ಕುಲಾಲ್,ಜ್ಯೋತಿ ಪದವು,ಭಾರತಿ ಕುಲಾಲ್, ಪಳ್ಳಿಯ ಕುಲಾಲ್ ಬಾಂಧವರು ಮತ್ತಿತರರು ಭಾಗವಹಿಸಿದ್ದರು.