ಕಾರ್ಕಳ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಮನೆಯ ಬಾಗಿಲನ್ನು ಮುರಿದು ಸಾವಿರಾರು ರೂ. ನಗದು ಕಳವುಗೈದಿರುವ ಪ್ರಕರಣ ನಡೆದಿದೆ.
ಬೆಳ್ಮಣ್ನ ವಿಜಯರಾಜ್ ಜಗನ್ನಾಥ ಕೋಡಿಮಾರು ಎಂಬವರು ಜುಲೈ.30 ರಂದು ಮನೆಗೆ ಬೀಗ ಹಾಕಿ ಮುಂಬೈಗೆ ತೆರಳಿ ಅಲ್ಲಿಂದ ತಿರುಮಲಕ್ಕೆ ಹೋಗಿ ಆಗಸ್ಟ್ 2 ರಂದು ಮನೆಗೆ ವಾಪಾಸಾಗಿದ್ದು, ಅವರು ಮನೆಯಲ್ಲಿ ಇಲ್ಲದಿರುವ ವೇಳೆ ಕಳ್ಳರು ಮನೆಯ ಹಿಂಬಾಗಿಲಿನ ಬೀಗವನ್ನು ಮುರಿದು ಮನೆಯಲ್ಲಿದ್ದ 25,000 ರೂ. ನಗದು ಹಾಗೂ ಕಾರ್ಯನಿರ್ವಹಿಸದ ಡಿವಿಆರ್ ಜೊತೆ ಹಾರ್ಡ್ ಡಿಸ್ಕ್ ಸೇರಿದಂತೆ ಒಟ್ಟು 25,000 ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಬೆಳ್ಮಣ್ ಗ್ರಾಮದ ರತ್ನ ವಿಠ್ಠಲ್ ಎಂಬವರು ಜುಲೈ.27 ರಂದು ಮನೆಗೆ ಬೀಗ ಹಾಕಿ ಮಂಗಳೂರಿನಲ್ಲಿರುವ ತಮ್ಮ ಸಹೋದರನ ಮನೆಗೆ ಹೋಗಿದ್ದು ಆಗಸ್ಟ್ 8 ರಂದು ವಾಪಾಸಾಗುವ ವೇಳೆಗೆ ಕಳ್ಳರು ಬಾಗಿಲು ಮುರಿದು 40,000 ರೂ. ನಗದನ್ನು ಕಳವುಗೈದಿದ್ದಾರೆ
ಈ ಪ್ರಕರಣಗಳ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
`