Share this news

ಕಾರ್ಕಳ: ಕೌಟುಂಬಿಕ ಕಲಹ ಹಾಗೂ ವಿಪರೀತ ಮದ್ಯಪಾನ ಚಟ ಹೊಂದಿದ್ದ ಯುವಕನೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ತಾನು ಕೆಲಸ ಮಾಡುತ್ತಿದ್ದ ಶೆಡ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಾಮರಾಜನಗರ ಜಿಲ್ಲೆಯ ಕುಮರೇಶ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಮರೇಶ್ ಸೂಡಾ ಗ್ರಾಮದ ಓರಿಯೇಟರ್ ಕ್ರಷರ್ ನಲ್ಲಿ ಟ್ರಾಕ್ಟರ್ ಚಾಲಕನಾಗಿ ಕೆಲಸ ಮಾಡಿಕೊಂಡು ಪತ್ನಿ ಕೀರ್ತನಳೊಂದಿಗೆ ವಾಸವಿದ್ದ. ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು, ಕುಮರೇಶ್ ಪತ್ನಿ ಕೀರ್ತನಳನ್ನು ಮದುವೆಯಾದ ವಿಚಾರದಲ್ಲಿ ಮನೆಯವರೊಂದಿಗೆ ಭಿನ್ನಾಭಿಪ್ರಾಯವಿದ್ದುದರಿಂದ ಮನನೊಂದು ಜೂ,29ರಂದು ರಂದು ಸಂಜೆ ತಾನು ಉಳಿದುಕೊಳ್ಳುವ ಶೆಡ್ಡಿನ ಒಳಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

 

 

 

Leave a Reply

Your email address will not be published. Required fields are marked *