Share this news

ಕಾರ್ಕಳ: ತಾಲೂಕಿನ ಎರಡು ಪ್ರತ್ಯೇಕ ಕಡೆಗಳಲ್ಲಿ ಅಕ್ರಮ ಮರಳು ಸಾಗಾಟವನ್ನು ತಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂAಡಿದ್ದಾರೆ.
ಕುಕ್ಕುಂದೂರಿನ ಸರ್ವಜ್ಞ ಸರ್ಕಲ್ ಬಳಿ ಕಾರ್ಕಳ ನಗರ ಠಾಣಾ ಎಸೈ ಸಂದೀಪ್ ಕುಮಾರ್ ಅವರು ಸಿಬ್ಬಂದಿಯವರೊAದಿಗೆ ವಾಹನ ತಪಾಸಣೆ ಮಾಡುತ್ತಿದ್ದಾಗ ಟಿಪ್ಪರಿನಲ್ಲಿ ಮರಳು ಅಕ್ರಮ ಸಾಗಾಟ ಮಾಡುತ್ತಿರುವುದು ಕಂಡುಬAದಿದೆ. ಆದರೆ ಪೊಲೀಸ್ ವಾಹನ ನೋಡಿದ ಕೂಡಲೇ ಮರಳು ಸಾಗಾಟದ ಟಿಪ್ಪರನ್ನು ಪೊಲೀಸರು ಹಿಂಬಾಲಿಸದAತೆ ರಿಡ್ಜ್ ಕಾರೊಂದು ಅಡ್ಡ ಬಂದು ಪೊಲೀಸರನ್ನು ಅಡ್ಡಗಟ್ಟಿದ್ದಾರೆ.

ಇನ್ನೊಂದೆಡೆ ಕಾರ್ಕಳ-ಉಡುಪಿ ಹೆದ್ದಾರಿಯ ನೀರೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಬೈಲೂರಿನಿಂದ ಹಿರಿಯಡ್ಕ ಕಡೆಗೆ ಹೋಗುತ್ತಿದ್ದ ಲಾರಿಯೊಂದು ಪೊಲೀಸರನ್ನು ನೋಡಿದ ಕೂಡಲೇ ಲಾರಿಯನ್ನು ಹಿಂದಕ್ಕೆ ತಿರುಗಿಸಿ ವಾಪಾಸಾಗಲು ಯತ್ನಿಸಿದಾಗ ಪೊಲೀಸರು ಬೆನ್ನತ್ತಿದ್ದಾರೆ. ಆದರೆ ಲಾರಿ ಚಾಲಕ ಪೊಲೀಸ್ ವಾಹನಕ್ಕೆ ತಡೆಯೊಡ್ಡಿ ವೇಗವಾಗಿ ಮುಂದಕ್ಕೆ ಹೋಗಿದ್ದು, ಕೌಡೂರಿನ ಕಂಪನ ಎಂಬಲ್ಲಿ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ.

ಮಂಗಳೂರಿನ ಉಳಾಯಿಬೆಟ್ಟು ಎಂಬಲ್ಲಿ ಸರಕಾರಿ ಹೊಳೆಯಿಂದ ರಹಿಮಾನ್ ಎಂಬುವರು ಕಳವು ಮಾಡಿ ನೀಡಿದ ಮರಳನ್ನು ಟಿಪ್ಪರ್‌ನಲ್ಲಿ ತುಂಬಿಸಿಕೊAಡು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ತಿಳಿದುಬಂದಿದ್ದು, ಪೊಲೀಸರು ಟಿಪ್ಪರ್ ಹಾಗೂ 3 ಯೂನಿಟ್ ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

 

 

Leave a Reply

Your email address will not be published. Required fields are marked *