Share this news

ಕಾರ್ಕಳ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಮಿಯ್ಯಾರು ಇದರ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಮಿಯ್ಯಾರು ಬಿ ಒಕ್ಕೂಟದ ಸದಸ್ಯರ ವತಿಯಿಂದ ಮೊರಾರ್ಜಿ ದೇಸಾಯಿ ಪ್ರೌಢಶಾಲೆಯಲ್ಲಿ ಮಕ್ಕಳಿಗಾಗಿ ಪರಿಸರ ಮಾಹಿತಿ ಹಾಗೂ ವನ ಮಹೋತ್ಸವ ಕಾರ್ಯಕ್ರಮ ಜರುಗಿತು.
ಸಮಾಜ ಸೇವಕ ಪ್ರಶಾಂತ್ ಪೂಜಾರಿ ನೆಲ್ಲಿಗುಡ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಪರಿಸರ ಸಂರಕ್ಷಣೆ ಹಾಗೂ ಅರಣ್ಯ ಬೆಳೆಸುವ ಮಹತ್ವ ತಿಳಿಸಿದರು.
ಒಕ್ಕೂಟ ಅಧ್ಯಕ್ಷ ವಿಠ್ಠಲ್ ಎಸ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಮುಖ್ಯ ಅತಿಥಿ ಗಳಾಗಿ ಕಾರ್ಕಳ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಗೌಡ, ಹಾಗೂ ವಲಯ ಅಧ್ಯಕ್ಷ ಅಶ್ವಥ್ ನಾರಾಯಣ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆ ಸದಸ್ಯರಾಗಿರುವ ಶಶಿಧರ್ ಕುಲಾಲ್ ಮಾತನಾಡಿ ಮಕ್ಕಳಿಗೆ ಪರಿಸರ ಬೆಳೆಸಿ ಉಳಿಸುವ ಬಗ್ಗೆ ಮಾಹಿತಿ ನೀಡಿದರು.
ನಿಕಟಪೂರ್ವ ವಲಯಾಧ್ಯಕ್ಷರಾದ ಪ್ರಶಾಂತ್ ಡಿ ಸೋಜ ಮಿಯ್ಯಾರು ವಲಯದ ಮೇಲ್ವಿಚಾರಕರಾಗಿರುವ ದಿನೇಶ್ ಹಗ್ದೆ ಉಪಸ್ಥಿತರಿದ್ದರು.
ಸದಾನಂದ್ ಸಾಲಿಯಾನ್ ಕೆರ್ವಾಶೆ ಪ್ರಸ್ತಾವನೆಗೈದರು.
ಕಾರ್ಕಳ ತಾಲೂಕು ಕೃಷಿ ಅಧಿಕಾರಿ ಬ್ರಿಜೇಶ್ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಸುರೇಖ ಸ್ವಾಗತಿಸಿ ಶಿಕ್ಷಕ ಮೋಹನ್ ವಂದಿಸಿದರು.

 

 

 

Leave a Reply

Your email address will not be published. Required fields are marked *