Share this news

ಕಾರ್ಕಳ:ಟಿಪ್ಪರ್ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಸ್ಕೂಟರ್ ಟಿಪ್ಪರ್ ಲಾರಿಗೆ ಸಿಲುಕಿ ಅಪ್ಪಚ್ಚಿಯಾದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ ಸಂಭವಿಸಿದೆ.
ಮುಂಡ್ಕೂರು ಗ್ರಾಮದ‌ ನಿವಾಸಿ ಸೊಮನಾಥ ಎಂಬವರು ಶನಿವಾರ ಬೆಳಗ್ಗೆ ತನ್ನ ಸ್ಕೂಟರಿನಲ್ಲಿ ಸಂಕಲಕರಿಯದಿಂದ ಮುಲ್ಲಡ್ಕ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ,ಮುಂಡ್ಕೂರಿನಿಂದ ಮುಲ್ಲಡ್ಕ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಚಾಲಕ ಏಕಾಎಕಿ ಟಿಪ್ಪರನ್ನು ಯಾವುದೇ ಸೂಚನೆ ನೀಡದೆ ಹಠಾತ್ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ,ಸವಾರ ಸೋಮನಾಥ ಅವರು ಚಲಾಯಿಸುತ್ತಿದ್ದ ಸ್ಕೂಟರಿನ ಮೇಲೆ ಹತ್ತಿದೆ.ಈ ಅಪಘಾತದಲ್ಲಿ ಸ್ಕೂಟರ್ ಅಪ್ಪಚ್ಚಿಯಾಗಿದ್ದು,ಅಪಾಯವನ್ನು ಅರಿತ ಸವಾರ ಸೋಮನಾಥ ಪಕ್ಕಕ್ಕೆ ಹಾರಿ ಬಚಾವಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

 

 

                        

                          

Leave a Reply

Your email address will not be published. Required fields are marked *