Share this news

ಕಾರ್ಕಳ: ಅತ್ತೂರು ಪರ್ಪಲೆಗಿರಿಯ ಧರ್ಮದೈವ ಕಲ್ಕುಡ ಕಲ್ಲುರ್ಟಿ ಹಾಗೂ ತೂಕತ್ತರೀ ಪರಿವಾರ ದೈವಗಳ ಬಿಂಬ ಪ್ರತಿಷ್ಠೆ, ಸಾನಿಧ್ಯ ಕಲಶೋತ್ಸವ,ಸಿರಿ ಸಿಂಗಾರ ನೇಮೋತ್ಸವದ ಪ್ರಯುಕ್ತ
ಮೇ 17ರಂದು ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಕಾರ್ಕಳ ಬಂಡೀಮಠದ ಗಣಪತಿ ದೇವಸ್ಥಾನದಿಂದ ಭವ್ಯ ಹಸಿರು ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ.
ಕಾರ್ಕಳದ ದಶ ದಿಕ್ಕುಗಳಿಂದ ಹಾಗೂ ಕಾರ್ಕಳ ಹೆಬ್ರಿ ತಾಲೂಕಿನ ಪ್ರತೀ ಗ್ರಾಮಗಳಿಂದ ಭಕ್ತಾದಿಗಳು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು,ಈ ಸಂದರ್ಭದಲ್ಲಿ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಪಂಚ ಲೋಹದ ವಿಗ್ರಹಗಳು ಕೂಡಾ ಸಾಗಲಿರುವುದು ವಿಶೇಷವಾಗಿದೆ. ಕಾರ್ಕಳದ ವಿವಿಧ ರಸ್ತೆಗಳ ಮೂಲಕ ಸಂಚರಿಸಿ ಪರ್ಪಲೆ ಗಿರಿಯತ್ತ ಕೊಂಡೊಯ್ಯಲಾಗುವುದು ಎಂದು ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.
ಪ್ರತೀ ಗ್ರಾಮದಿಂದ ಬರುವ ಹೊರೆ ಕಾಣಿಕೆ ಮೆರವಣಿಗೆ ಜತೆ ಬೈಕುಗಳು, ರಿಕ್ಷಾ, ಕಾರುಗಳೊಂದಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ವಾಹನ ಜಾಥಾದಲ್ಲಿ ಪಾಲ್ಗೊಳ್ಳಬೇಕಾಗಿ ಸಮಿತಿಯ ಪ್ರಕಟಣೆ ತಿಳಿಸಿದೆ.

 

 

 

Leave a Reply

Your email address will not be published. Required fields are marked *